More

    ಕೆಪಿಸಿಸಿ ಅಧ್ಯಕ್ಷರನ್ನು ಮುಟ್ಟಿದ್ದಕ್ಕೆ ಬಿಜೆಪಿ 66ಕ್ಕೆ ಇಳಿದಿದೆ; ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್

    ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗಿಂತ ಹತ್ತು ಪಟ್ಟು ನಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರಬಲರಾಗಿದ್ದಾರೆ. ಅವರನ್ನು ಒಂದು ಬಾರಿ ಮುಟ್ಟಿದ್ದಕ್ಕೆ ಬಿಜೆಪಿ 66ಕ್ಕೆ ಇಳಿದಿದೆ. ಇನ್ನು ಮುಂದೆ ಅವರ ಹತ್ತಿರಕ್ಕೆ ಬಂದರೂ 33ಕ್ಕೆ ಬಿಜೆಪಿಯವರು ಇಳಿಯುತ್ತಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು.
    ನಗರದಲ್ಲಿ ಗುರುವಾರ ಯುವ ಕಾಂಗ್ರೆಸ್ ಘಟಕದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮುನ್ನ ಬೈಕ್ ರ‌್ಯಾಲಿ ನಡೆಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿ.ವೈ.ವಿಜಯೇಂದ್ರ ಅವರು ಯುವ ಘಟಕದ ಅಧ್ಯಕ್ಷರಾಗಿದ್ದರೆ ಸಂತೋಷವಾಗುತ್ತಿತ್ತು. ಅವರ ಸಮಯ ಚೆನ್ನಾಗಿದೆ, ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.
    ಸಿಎಂ ಪುತ್ರ ಯತೀಂದ್ರ ಅವರು ಶ್ಯಾಡೋ ಸಿಎಂ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ನಲಪಾಡ್, ಸಿದ್ದರಾಮಯ್ಯನವರು ಹೇಗೆ ಆಡಳಿತ ಮಾಡುತ್ತಿದ್ದಾರೆ ನೀವೇ ನೋಡಿದ್ದೀರಿ. 2013ರಿಂದ 2018ರವರೆಗೆ ಹೇಗೆ ಉತ್ತಮ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಶ್ಯಾಡೋ ಸಿಎಂ ಯಾವುದೂ ಇಲ್ಲ. ಇದು ಕೆಲವರ ಆರೋಪವಷ್ಟೇ ಎಂದು ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts