More

    ಕಾಂಗ್ರೆಸ್ ಕುಸ್ತಿ ಹಿಡಿಯಲು ಸಿದ್ಧ; ಸಿಎಂ ಸವಾಲು ಸ್ವೀಕರಿಸಿದ ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ

    ಹಾವೇರಿ: ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಮುಖ್ಯಮಂತ್ರಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಶಿಗ್ಗಾಂವಿಯಲ್ಲೇ ಓಡಾಡುವಂತೆ ಮಾಡುತ್ತೇವೆ. ನಾವು ಕುಸ್ತಿ ಹಿಡಿಯಲು ಸಿದ್ಧರಿದ್ದೇವೆ ಎಂದು ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ ಅವರು ಸಿಎಂ ಸವಾಲು ಸ್ವೀಕರಿಸಿದರು.
    ಶಿಗ್ಗಾಂವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಚ್ಚರಿಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತೇವೆ. ವಿನಯ ಕುಲಕರ್ಣಿ ಬರಲ್ಲ. ನನಗೆ ಪಕ್ಷ ಟಿಕೆಟ್ ಕೊಟ್ಟಿಲ್ಲ. ‘ಖಾದ್ರಿ ನಾಲ್ಕು ಬಾರಿ ಸೋತಿದ್ದಾರೆ. ದುರ್ಬಲ ಇದ್ದಾರೆ’ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಸಲೀಂ ಅಹ್ಮದ್ ಹೇಳಿದ್ದಾರೆ. ಹಾಗಾಗಿ, ನನಗೆ ಟಿಕೆಟ್ ಇಲ್ಲ ಎಂದಿದ್ದಾರೆ. ಸಲೀಂ ಅವರೇ ಬಂದು ಇಲ್ಲಿ ಸ್ಪರ್ಧಿಸಬೇಕು. ಪಕ್ಷ ಉಳಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
    ಕಾಂಗ್ರೆಸ್ ಪಕ್ಷದ ಸಲುವಾಗಿ 23 ವರ್ಷ ಮನೆ ಹಾಳು ಮಾಡಿಕೊಂಡು ದುಡಿದಿದ್ದೇನೆ. ನಮ್ಮ ಜಿಲ್ಲೆಯ ಕೆಲ ನಾಯಕರ ತಪ್ಪಿನಿಂದ ನಮ್ಮ ಕೆಲ ಕಾರ್ಯಕರ್ತರು ಇಂದು ಬಿಜೆಪಿಗೆ ಸೇರಿದ್ದಾರೆ. ನಮ್ಮ ಪಕ್ಷದಿಂದ ಎಲ್ಲೋ ಹಳಿ ತಪ್ಪಿದ್ದರಿಂದ ನಾಲ್ಕು ಬಾರಿ ಸೋತಿದ್ದೇವೆ. ಏನೇ ಆದರೂ ನಾನು ಕಾಂಗ್ರೆಸ್ ತೊರೆಯಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts