More

    ಸವಣೂರಲ್ಲೊಂದು ಹೃದಯ ವಿದ್ರಾವಕ ಘಟನೆ: ರೈಲು ಹಳಿ ಮೇಲೆ ತಾಯಿ- ಮಗ ಆ*ಹತ್ಯೆ, ಸುದ್ದಿ ಕೇಳಿ ಮಗಳೂ ನೇಣಿಗೆ ಶರಣು

    ಸವಣೂರ: ಯಾವುದೋ ಕಾರಣಕ್ಕೆ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ತಾಯಿಯೂ ಮಗನಂತೆ ರೈಲುಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರ ತಾಲೂಕು ಯಲವಗಿ ರೈಲು ನಿಲ್ದಾಣದ ಬಳಿ ಸೋಮವಾರ ನಡೆದಿದೆ. ತಾಯಿ- ಮಗನ ಆತ್ಮಹತ್ಯೆ ವಿಷಯ ತಿಳಿದು ಮಗಳು ಲಕ್ಷ್ಮೇಶ್ವರ ತಾಲೂಕು ಗೋನಾಳದಲ್ಲಿ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

    ಮಂಜುನಾಥ ತೇಲಿ (26), ಸಾವಕ್ಕ ತೇಲಿ (45) ಆತ್ಮಹತ್ಯೆಗೆ ಶರಣಾದ ತಾಯಿ- ಮಗ. ಇವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ನಿವಾಸಿಗಳು ಎನ್ನಲಾಗಿದೆ.

    ಕೌಟುಂಬಿಕ ಸಮಸ್ಯೆಯಿಂದ ಮಂಜುನಾಥ ತೀವ್ರವಾಗಿ ಮನನೊಂದಿದ್ದ. ಮನೆಯ ಉಪಯೋಗಕ್ಕೆ 4 ಲಕ್ಷ ಸಾಲ ಮಾಡಿ ಟ್ರ್ಯಾಕ್ಟರ್ ಪಡೆದರೆ ಕೈಗಡವಾಗಿ 1.5 ಲಕ್ಷ ಸಾಲವನ್ನು ಕುಟುಂಬಸ್ಥರು ಮಾಡಿಕೊಂಡಿದ್ದರು. ಟ್ರ್ಯಾಕ್ಟರ್ ಸಾಲವನ್ನು ಮರು ಪಾವತಿಸುವ ಸಲುವಾಗಿ ಕುಟುಂಬದಲ್ಲಿ ಕಲಹಗಳು ನಡೆಯುತ್ತಿದ್ದವು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿ ಬಳಿಗೆ ಬಂದಿದ್ದ. ಇದನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗದ ಕಾರಣ ತಾಯಿ ಸಾವಕ್ಕ ಹಳಿಗೆ ತಲೆಕೊಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರೈಲು ಹಳಿ ಮೇಲೆ ತಾಯಿ-ಮಗನ ಮೃತದೇಹ ಛಿದ್ರ ಛಿದ್ರಗೊಂಡಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

    ಸ್ಥಳಕ್ಕೆ ಯಲವಗಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts