More

    ಸಿಎಂ ಬೊಮ್ಮಾಯಿ, ಬಿ.ಸಿ.ಪಾಟೀಲ, ಪೂಜಾರ, ಬಳ್ಳಾರಿಗೆ ಒಲಿದ ಬಿಜೆಪಿ ಟಿಕೆಟ್

    ಹಾವೇರಿ: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಬಿಡುಗಡೆ ಮಾಡಿದೆ. ಹಾಲಿ ಸಿಎಂ, ಸಚಿವ ಹಾಗೂ ಇಬ್ಬರು ಶಾಸಕರಿಗೆ ಬಂಪರ್ ಧಮಾಕಾ ದೊರೆತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಸಚಿವ ಬಿ.ಸಿ.ಪಾಟೀಲ (ಹಿರೇಕೆರೂರ), ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ (ಬ್ಯಾಡಗಿ) ಹಾಗೂ ಅರುಣಕುಮಾರ ಪೂಜಾರ (ರಾಣೆಬೆನ್ನೂರ) ಅವರಿಗೆ ಬಿಜೆಪಿ ಟಿಕೆಟ್ ನಿಕ್ಕಿಯಾಗಿದೆ. ಹೆಸರು ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರಲ್ಲಿ ಸಂತಸ ಮುಗಿಲು ಮುಟ್ಟಿದೆ. ಟಿಕೆಟ್ ಘೋಷಣೆ ವಿಳಂಭವಾಗುತ್ತಿದ್ದ ನಡುವೆ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬ ಸಂದೇಶ ಬಿಜೆಪಿ ಮೂಲಗಳಿಂದ ಬಂದಿತ್ತು. ಈ ಹಿನ್ನೆಲೆಯಲ್ಲಿ ಟೆಂಪಲ್ ರನ್ ಮಾಡುತ್ತಿದ್ದ ಆಕಾಂಕ್ಷಿಗಳು ಕ್ಷೇತ್ರಕ್ಕೆ ವಾಪಸಾಗಿದ್ದಾರೆ. ಟಿಕೆಟ್ ಪಕ್ಕಾ ಆದ ಕೂಡಲೇ ರಾತ್ರೋ ರಾತ್ರಿ ನೂರಾರು ಬೆಂಬಲಿಗರು ಶಾಸಕ, ಸಚಿವರ ಮನೆ ಕಡೆ ಧಾವಿಸಿ ಶುಭ ಕೋರಿದರು. ಸಿಹಿ ತಿಂದು, ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts