More

    ಹೊರಗಡೆ ತಿರುಗಾಡಿ ಬರ್ತೀವಿ ಎಂದು ಹೊರಟ ನವದಂಪತಿ ಬರಲೇ ಇಲ್ಲ: ಹುಡುಕಾಡಿದ ಕುಟುಂಬಕ್ಕೆ ಕಾದಿತ್ತು ಶಾಕ್!​

    ಹಾಸನ: ಹೊರಗಡೆ ತಿರುಗಾಡಿ ಬರುತ್ತೇವೆಂದು ಮನೆಯಿಂದ ಹೊರ ಹೋದ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸಕಲೇಶಪುರದ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.

    ಅರ್ಥೇಶ್ (27) ಹಾಗೂ ಕೃತಿಕಾ (23) ಮೃತ ದಂಪತಿ. ಬೇಲೂರು ಮೂಲದ ಅರ್ಥೇಶ್ ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಗುರುವಾರ ಪತ್ನಿ ಕೃತಿಕಾ ಮನೆಗೆ ಬಂದಿದ್ದ. ಈ ವೇಳೆ ಬೈಕ್​ನಲ್ಲಿ ಹೊರ ಹೋಗಿ ಬರುವುದಾಗಿ ಮನೆಯವರಿಗೆ ಹೇಳಿ ತೆರಳಿದ್ದರು.

    ಇದನ್ನೂ ಓದಿ: VIDEO| ಭಾರತದಲ್ಲಿ ಪತ್ತೆಯಾಯ್ತು ಎರಡು ತಲೆ: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತಿರಾ…!

    ಸಮಯವಾಗುವುದನ್ನು ನೋಡಿ ಮನೆಯವರು ದಂಪತಿಗೆ ಫೋನ್​ ಮಾಡಿದ್ದಾರೆ. ಆದರೆ ಸ್ವಿಚ್​ ಆಫ್​ ಆಗಿದ್ದನ್ನು ಕೇಳಿ ಗಾಬರಿಗೊಂಡು ನಿನ್ನೆ ಸಂಜೆ ಹುಡುಕಾಡಿದ್ದಾರೆ. ಈ ವೇಳೆ ಕೃತಿಕಾ ಶವ ಮೀನಿನ ಬಲೆಗೆ ಸಿಕ್ಕಿ ಪತ್ತೆಯಾಗಿದೆ. ಇಂದು ಮುಂಜಾನೆ ಅರ್ಥೇಶ್ ಶವ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಸೆಲ್ಫಿ ತಗೆಯಲು ಹೋಗಿ ಇಬ್ಬರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ತೀವ್ರ ಸೊಂಟದ ನೋವು ಎಂದ ವ್ಯಕ್ತಿಯಲ್ಲಿ ದೇಹದಲ್ಲಿ ಎಂಥ ಅಚ್ಚರಿ ಕಾದಿತ್ತು ನೋಡಿ!

    ಲಾಕ್​ಡೌನ್​ನಲ್ಲಿ ಸರ್ಕಾರಿ ಶಾಲೆಯೇ ಕುಡುಕರ ಅಡ್ಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts