More

    ಜೆಡಿಎಸ್, ಕಾಂಗ್ರೆಸ್‌ನವರು ಪೆನ್ನು, ಪೇಪರ್ ಹಿಡಿದು ಲೆಕ್ಕ ಮಾಡಲಿ


    ಹಾಸನ: ಶಿರಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ 25 ಸಾವಿರ ಮತಗಳ ಅಂತರಲ್ಲಿ ಗೆಲುವು ಸಾಧಿಸುತ್ತಾರೆ, ನ. 10ರ ವರೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಪೆನ್ನು-ಪೇಪರ್ ಹಿಡಿದು ಲೆಕ್ಕ ಹಾಕಿಕೊಳ್ಳಲಿ ಎಂದು ಶಾಸಕ ಪ್ರೀತಂ ಜೆ. ಗೌಡ ಭವಿಷ್ಯ ನುಡಿದರು.

    ಜೆಡಿಎಸ್ ಹಾಗೂ ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿರುವ ಕ್ಷೇತ್ರದ ಜನ ಬಿಜೆಪಿಗೆ ಬೆಂಬಲಿಸಿದ್ದಾರೆ. ಕಳೆದ ಬಾರಿ ಕೇವಲ 18 ಸಾವಿರ ಮತ ಗಳಿಸಿದ್ದ ಬಿಜೆಪಿ ಈಗ ಅದಕ್ಕಿಂತ ಹೆಚ್ಚು ಅಂತರದಲ್ಲಿ ಗೆಲ್ಲುತ್ತದೆ. ನ. 10ರ ವರೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಪೇಪರ್, ಪೆನ್ನು ಹಿಡಿದು ಲೆಕ್ಕ ಬರೆಯುತ್ತಾ ಸಮಯ ಕಳೆಯಲಿ ಎಂದು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದರು.

    ರಾಜರಾಜೇಶ್ವರಿ ನಗರದಲ್ಲೂ ಬಿಜೆಪಿಯ ಮುನಿರತ್ನ ಗೆಲ್ಲುತ್ತಾರೆ. ಚುನಾವಣೆ ಫಲಿತಾಂಶ ಬಳಿಕ ಸರ್ಕಾರದ ಭವಿಷ್ಯ ಬದಲಾಗುತ್ತದೆ ಎಂಬ ಊಹಾಪೋಹಗಳಿಗೆ ನಾನು ಕಿವಿಗೊಡುವುದಿಲ್ಲ. 2023ರ ವರೆಗೆ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ನಂತರದ ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts