More

    ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ನಿಂಬೆ ಇಟ್ಟುಕೊಳ್ತಾರಂತೆ ಇವರು !

    ಹಾಸನ: ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೇ ನಿಂಬೆ ಹಣ್ಣನ್ನು ಇಟ್ಟುಕೊಳ್ಳುತ್ತಾರೆ. ದುಷ್ಟಕೂಟಗಳು ಮಾಟ ಮಂತ್ರ ಮಾಡಿದರೆ ಅದನ್ನು ಎದುರಿಸುವುದಕ್ಕಾಗಿ ನಾನು ನಿಂಬೆ ಹಣ್ಣು ಇಟ್ಟುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿರುಗೇಟು ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಿಂಬೆ ಹಣ್ಣಿನ ಮೂಲಕ ಕೆಲ ದುಷ್ಟ ಕೂಟಗಳನ್ನು ಎದುರಿಸುತ್ತೇನೆ. ಅದಕ್ಕಾಗಿ ಯಾವಾಗಲೂ ನನ್ನ ಬಳಿ ನಿಂಬೆ ಹಣ್ಣು ಇರುತ್ತದೆ ಎಂದರು.

    ನ. 28 ರಂದು ಚನ್ನರಾಯಪಟ್ಟಣದಲ್ಲಿ ಏರ್ಪಡಿಸಿದ್ದ ಗ್ರಾಮ ಸ್ವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಕಾರ ಸಚಿವ ಸೋಮಶೇಖರ್ ನಿಂಬೆ ಹಣ್ಣಿನಿಂದ ತುಂಬಾ ತೊಂದರೆಯಾಗಿದೆ ಎಂದು ಟೀಕಿಸಿದ್ದರು. ಆ ಮಾತಿಗೆ ರೇವಣ್ಣ ಇಂದು ಪ್ರತಿಕ್ರಿಯಿಸಿದ್ದಾರೆ.

    ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿಗೆ ವಾಮಮಾರ್ಗ ಆಯ್ದುಕೊಂಡಿರುವ ಬಿಜೆಪಿಯು ಬೆಂಬಲಿತ ಅಭ್ಯರ್ಥಿಗಳಿಗೆ ತಲಾ 10 ಸಾವಿರ ರೂ. ದೇಣಿಗೆ ನೀಡುವಂತೆ ಪಿಡಿಒ, ಪಂಚಾಯಿತಿ ಕಾರ್ಯದರ್ಶಿ ಹಾಗೂ ತಾಪಂ ಇಒಗಳಿಗೆ ತಾಕೀತು ಮಾಡಿದೆ. ಬಿಜೆಪಿ ವರಿಷ್ಠರ ಈ ಆದೇಶವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಜೆಡಿಎಸ್‌ನಿಂದ ಜಿಲ್ಲಾಧಿಕಾರಿ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ಇಷ್ಟು ದಿನ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಲೂಟಿ ಹೊಡೆಯಲಾಗುತ್ತಿತ್ತು. ಅನೇಕ ತಿಂಗಳುಗಳಿಂದ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಮಾಡದೆ ಮುಂದೂಡಲಾಗುತ್ತಿತ್ತು. ಹೈಕೋರ್ಟ್ ಛಿಮಾರಿ ಹಾಕಿದ ಮೇಲೆ ಚುನಾವಣೆಗೆ ಮುಂದಾಗಿದೆ. ಗ್ರಾಪಂ ಚುನಾವಣೆ ನ್ಯಾಯಯುತವಾಗಿ ನಡೆಯಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts