More

    ನಾನು ದಿಢೀರ್‌ನೇ ರಾಜಕಾರಣಿಯಾಗಿಲ್ಲ, ಸಮಾಜ ಸೇವೆಯಿಂದ ಬಂದಿದ್ದೇನೆ ಎಂದ್ರು ಹಾಸನ ಎಂಎಲ್‌ಎ

    ಹಾಸನ: ಸಮಾಜ ಸೇವೆ ಮೂಲಕ ರಾಜಕೀಯಕ್ಕೆ ಬಂದಿರುವ ನಾನು ಕ್ಷೇತ್ರದಲ್ಲಿ ಆಗಬೇಕಿರುವ ಕಾಮಗಾರಿಯ ಅರಿವು ಹೊಂದಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

    ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ, ಹಸಿರು ಭೂಮಿ ಪ್ರತಿಷ್ಠಾನ ವತಿಯಿಂದ ಭಾನುವಾರ ನಗರದ ಹಬೀಬಿಯಾ ಸಾಮಿಲ್ ರಸ್ತೆಯಲ್ಲಿ ಏರ್ಪಡಿಸಿದ್ದ ಹುಣಸಿನಕೆರೆ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದಿಢೀರನೆ ರಾಜಕೀಯಕ್ಕೆ ಬಂದ ಕೆಲವರು ನಮ್ಮ ನಡುವೆ ಇದ್ದಾರೆ. ಆದರೆ ನಾನು ಆ ಗುಂಪಿಗೆ ಸೇರಿದವನಲ್ಲ. ಚನ್ನಪಟ್ಟಣ ಕೆರೆಯಲ್ಲಿ ಡಿಸ್ನಿ ಲ್ಯಾಂಡ್ ನಿರ್ಮಿಸಬೇಕೆಂದು ಕಳೆದ ಸರ್ಕಾರ 144 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿತ್ತು. ಆದರೆ ಸರ್ಕಾರ ಪತನ ಹಾಗೂ ಆರ್ಥಿಕ ಸಮಸ್ಯೆಯಿಂದ ಅದು ಈಡೇರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅಷ್ಟೇ ಅನುದಾನದಲ್ಲಿ ನಗರದ ಆರು ಕೆರೆ ಹಾಗೂ 9 ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡಬೇಕೆಂದರೆ ಮರಗಿಡಗಳ ಬೆಳೆಸಬೇಕು.

    ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಬೇಕಿದೆ. ಆದ್ದರಿಂದ ನಗರದ ಗಂಧದ ಕೋಠಿಯ 4 ಎಕರೆಯಲ್ಲಿ ಸುಸಜ್ಜಿತ ಉದ್ಯಾನ ನಿರ್ಮಿಸಲು 3.50 ಕೋಟಿ ರೂ. ಮಿಸಲಿಡಲಾಗಿದೆ. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 37 ಕೋಟಿ, ಹುಣಸಿನಕೆರೆಗೆ 7 ಹಾಗೂ ಸತ್ಯಮಂಗಲ ಕೆರೆಗೆ 11 ಕೋಟಿ ರೂ. ನಿಗದಿಪಡಿಸಲಾಗಿದೆ. ಎಲ್ಲ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts