ಹರಪನಹಳ್ಳಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಕಾಮದಹನ ಆಚರಣೆ ನಡೆಯಿತು.
ಬಣಗಾರಪೇಟೆ, ಸಾಳೇರ ಓಣಿ, ಕೆಂಪಯ್ಯನ ಮಠದ ಹತ್ತಿರ, ಜೋಷಿಕೇರಿ ಮತ್ತಿತರ ಕಡೆಗಳಲ್ಲಿ ರತಿ-ಮನ್ಮಥರನ್ನು ಸ್ಮರಣೆ ನಡೆಯಿತು. ತಾಯಮ್ಮ ಹುಣಸೆಮರದ ಹತ್ತಿರ ಸಂಸ್ಕಾರ ಭಾರತಿ ಮತ್ತಿತರ ಸಂಘಗಳು ಕಾಮಣ್ಣನ ದಹನ ಕಾರ್ಯಕ್ರಮ ನೆರವೇರಿಸಿದರು.
ಬಣ್ಣದ ಮಡಿಕೆ ಒಡೆಯುವ, ಹಲಗೆ ವಾದನ ಸಹಿತ ಓಕುಳಿ ಬುಧವಾರ ನಡೆಯಲಿದ್ದು, ಯುವಕರು, ಯುವತಿಯರು ಮತ್ತು ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ.