More

    ಹರಿಹರದಲ್ಲಿ ಆಮೆ, ಹಾವು ಮಾರಾಟಕ್ಕೆ ಯತ್ನ

    ಶಿವಮೊಗ್ಗ: ಹರಿಹರದಲ್ಲಿ ಒಂದು ಆಮೆ ಹಾಗೂ ಮಣ್ಣು ಮುಕ್ಕ ಹಾವು ಮಾರಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರು ಹರಿಹರ ಪಟ್ಟಣದಲ್ಲಿ ಆಮೆ ಹಾಗೂ ಮಣ್ಣು ಮಕ್ಕ ಹಾವು ಮಾರಾಟದಲ್ಲಿ ನಿರತರಾಗಿದ್ದ ಸಂದರ್ಭದಲ್ಲೇ ಅರಣ್ಯ ಸಂಚಾರಿ ದಳದ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ವೀರಗಾರನ ಭೈರನಕೊಪ್ಪದ ರಮೇಶ್ ನಾಯ್್ಕ ರಾಣೆಬೆನ್ನೂರು ತಾಲೂಕು ಕಜ್ಜರಿ ಗ್ರಾಮದ ಜಗದೀಶ ರಾಮಪ್ಪ ತಿಮ್ಮಜ್ಜಿ, ದಾವಣಗೆರೆ ತಾಲೂಕು ಹೊನ್ನೂರಿನ ಹರೀಶ ಹಾಗೂ ಹೊಸನಗರ ತಾಲೂಕು ಹಾಲುಗುಡ್ಡೆ ಬಾಳೂರಿನ ನಾಗೇಂದ್ರ ಬಂಧಿತ ಆರೋಪಿಗಳು. ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್​ಐ ಬಿ.ಮಲ್ಲಿಕಾರ್ಜುನ, ಸಿಬ್ಬಂದಿ ರಂಗನಾಥ, ಗಣೇಶ್, ರತ್ನಾಕರ್, ಗಿರೀಶ್,ವಿಶ್ವನಾಥ ಮತ್ತು ಮಂಜುನಾಥ ಅವರು ಡಿವೈಎಸ್ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts