More

    ಯತ್ನಾಳ್ ಹೇಳಿಕೆಗೆ ಸಿಪಿಐ ಖಂಡನೆ

    ಹರಪನಹಳ್ಳಿ: ಹಿರಿಯ ಸ್ವಾತಂತ್ರೃ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯಿಸಿ ಸಿಪಿಐ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

    ಪಟ್ಟಣದ ಪ್ರವಾಸಿಮಂದಿರ ಆವರಣದಲ್ಲಿ ಸೇರಿದ ಸಂಘಟಕರು, ಯತ್ನಾಳ್ ವಿರುದ್ಧ ಘೋಷಣೆ ಕೂಗಿದರು. ಶಾಸಕ ಬಸವರಾಜಯತ್ನಾಳ್ ಅವರು ವಿವೇಚನಾರಹಿತವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಪಿಐ ಮುಖಂಡರಾದ ಹೊಸಳ್ಳಿ ಮಲ್ಲೇಶ್, ಸಂತೋಷ್, ಚಂದ್ರನಾಯ್ಕ ಎಂ.ತಿಮ್ಮಪ್ಪ, ನಾಗರಾಜ್ ಹುಲಿಕಟ್ಟಿ, ರಾಜಣ್ಣ ಹುಲಿಕಟ್ಟಿ, ರಾಜಪ್ಪ ಕಾವಲಹಳ್ಳಿ, ರಹಮತ್, ಬಸವರಾಜ ಶೃಂಗಾರತೋಟ, ಮುಜಾಫರ್ ಬಾಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts