ಅಲೆದಾಟ ತಪ್ಪಿಸಲು ಕಂದಾಯ ಅದಾಲತ್, ತಹಸೀಲ್ದಾರ್ ಎಂ.ಸಿದ್ದೇಶ ಮಾಹಿತಿ

blank
blank

ಹನುಮಸಾಗರ: ನಾನಾ ಯೋಜನೆಗಳ ಸಲುವಾಗಿ ಫಲಾನುಭವಿಗಳ ಅಲೆದಾಟ ತಪ್ಪಿಸಲು ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.

ಬಿಳೇಕಲ್‌ನಲ್ಲಿ ಪಿಂಚಣಿ, ಕಂದಾಯ ಹಾಗೂ ಪೌತಿ ಖಾತಾ ಆಂದೋಲನ ಅದಾಲತ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಪಿಂಚಣಿ, ಗ್ರಾಮವಾರು ಪಹಣಿಯಲ್ಲಿರುವ ಲೋಪದೋಷಗಳನ್ನು ತ್ವರಿತಗತಿಯಲ್ಲಿ ಸರಿಪಡಿಸುವ ಉದ್ದೇಶದಿಂದ ಸ್ಥಳದಲ್ಲೇ ಪಹಣಿ ತಿದ್ದುಪಡಿ ಒದಗಿಸಲಾಗುವುದು. ಜಮೀನಿನ ಮಾಲಿಕರು ಮರಣ ಹೊಂದಿದ ನಂತರ ಮೂಲ ಖಾತಾದಾರದಿಂದ ಅವರ ಕುಟುಂಬಗಳ ವಾರಸುದಾರರಿಗೆ ಸರ್ಕಾರದ ಯೋಜನೆಗಳ ಪರಿಹಾರದ ವಿಮೆ ಪಡೆಯಲು ಅನುಕೂಲವಾಗುವಂತೆ ಪೌತಿ ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು. ಎರಡು ಅಂಗವಿಕಲ, ಮೂರು ವಿಧವಾ ವೇತನ, ಏಳು ಸಂಧ್ಯಾ ಸುರಕ್ಷಾ ಸೇರಿ ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.

ಗ್ರಾಮಲೆಕ್ಕಾಧಿಕಾರಿಗಳಾದ ಪ್ರಸನ್ನ ಕುಲಕರ್ಣಿ, ರವಿ ಮಧನ್, ಹನುಮಂತಪ್ಪ ಸಂಶಿ, ಎಸ್ಡಿಎಂಸಿ ಅಧ್ಯಕ್ಷ ಪಂಪನಗೌಡ ಸಾಂತಗೌಡರ, ಶಿವಾನಂದ ರಾಮಸ್ವಾಮಿ, ಗ್ರಾಪಂ ಸದಸ್ಯರಾದ ಪರಮೇಶ ಕರಡಿ, ದೇವಕ್ಕ ಮಾರಸನಬಸರಿ, ಶೇಖಪ್ಪ ಕಂಬಳಿ, ಮಲ್ಲಿಕಾರ್ಜುನ ಮೇಗಲಮನಿ ಇತರರಿದ್ದರು.

Share This Article

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…