More

    ಅಪರೂಪದ ದಾಖಲೆ ಬರೆದ ಹನುಮಾನ್! ವಿವರ ಇಲ್ಲಿದೆ..

    ಹೈದರಾಬಾದ್​: ಸಂಕ್ರಾಂತಿ ಸಂದರ್ಭಕ್ಕೆ ಬಿಡುಗಡೆಯಾದ ‘ಹನುಮಾನ್’ ಸಾಕಷ್ಟು ಪ್ರೇಕ್ಷಕರನ್ನು ಸೆಳೆದು ಸದ್ದು ಮಾಡುತ್ತಿರುವ ಸಿನಿಮಾ. ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ನಾಯಕನಾಗಿ ತೇಜ ಸಜ್ಜಾ ನಟಿಸಿರುವ ಈ ಚಿತ್ರ ಅಪರೂಪದ ದಾಖಲೆ ನಿರ್ಮಿಸಿದೆ. ಸಂಕ್ರಾಂತಿ ಸೀಸನ್‌ನಲ್ಲಿ ಬಿಡುಗಡೆಯಾದ ಚಿತ್ರಗಳ ಪಟ್ಟಿಯಲ್ಲಿ, ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಈ ಮೂಲಕ ಪೋಸ್ಟರ್ ಶೇರ್ ಮಾಡಿದ್ದಾರೆ.

    ಇದನ್ನೂ ಓದಿ: ‘ತಂತ್ರಜ್ಞಾನವನ್ನು ದೂಷಿಸುವುದು ಸರಿಯಲ್ಲ’.. ಡೀಪ್ ಫೇಕ್ ಬಗ್ಗೆ ಕೃತಿ ಸನನ್ ಕಾಮೆಂಟ್

    “‘ಹನುಮಾನ್’ ಪ್ರಪಂಚದಾದ್ಯಂತದ ಪ್ರೇಕ್ಷಕರ ಪ್ರೀತಿಯೊಂದಿಗೆ ಇತಿಹಾಸವನ್ನು ಸೃಷ್ಟಿಸಿದೆ. ಇದು ಟಾಲಿವುಡ್‌ನ 92 ವರ್ಷಗಳ ಇತಿಹಾಸದಲ್ಲಿ ಸಾರ್ವಕಾಲಿಕ ಸಂಕ್ರಾಂತಿ ಬ್ಲಾಕ್‌ಬಸ್ಟರ್ ಆಗಿದೆ” ಎಂದು ಅದು ಹೇಳಿದೆ.

    ಜನವರಿ 12 ರಂದು ಬಿಡುಗಡೆಯಾದ ಹನುಮಾನ್ ಇದುವರೆಗೆ 278 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
    ಇನ್ನು ಜೈ ಹನುಮಾನ್’ ಈ ಚಿತ್ರದ ಮುಂದುವರಿದ ಭಾಗವಾಗಿರಲಿದೆ. ಕೆಲ ದಿನಗಳ ಹಿಂದೆಯೇ ಪ್ರಿ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದ್ದು, ಈ ಸಿನಿಮಾದ ಮುಖ್ಯ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಹೀರೋ ಒಬ್ಬರನ್ನು ಆಯ್ಕೆ ಮಾಡಲು ನಿರ್ದೇಶಕರು ಯೋಚಿಸುತ್ತಿದ್ದಾರೆ. ಪ್ರಶಾಂತ್ ವರ್ಮಾ ಅವರು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ,
    ಜೈಹನುಮಾನ್​ನಲ್ಲಿ ಚಿರಂಜೀವಿ ಕೂಡ ನಟಿಸುವ ಸಾಧ್ಯತೆಯಿದೆ. ರಾಮನಾಗಿ ತಮ್ಮ ಮನಸ್ಸಿನಲ್ಲಿರುವ ನಟ ಮಹೇಶ್ ಬಾಬು, ಸಾಮಾಜಿಕ ಜಾಲತಾಣಗಳಲ್ಲಿ ರಾಮನಂತೆ ಸೃಷ್ಟಿಸಿರುವ ಚಿತ್ರಗಳನ್ನು ನೋಡಿದ್ದೇನೆ, ಕಚೇರಿಯಲ್ಲೂ ರಾಮನ ಪಾತ್ರವನ್ನು ಮಹೇಶ್ ಮುಖದೊಂದಿಗೆ ಮರುಸೃಷ್ಟಿಸಿದ್ದೇನೆ ಎಂದು ಹೇಳಿದರು. ಭಾಗ 1ರಲ್ಲಿ ನಟಿಸಿದ್ದ ತೇಜಾ ಭಾಗ 2ರಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

    ಹನುಮಾನ್​ನಲ್ಲಿ ಒಂದು ದೃಶ್ಯವನ್ನು ಅಯೋಧ್ಯೆಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲು ಬಯಸಿದ್ದೆ. ಒಂದು ಮಗು ರಾಮಮಂದಿರದಲ್ಲಿ ದೀಪಗಳನ್ನು ಬೆಳಗಿಸಲು ಪ್ರಯತ್ನಿಸುತ್ತದೆ. ಆದರೆ ಗಾಳಿಯಿಂದಾಗಿ ಅವು ಬೆಳಗುವುದಿಲ್ಲ. ಅದೇ ಸಮಯದಲ್ಲಿ ಹನುಮಾನ್ ದೇವಾಲಯದ ಮೇಲಿನಿಂದ ಹೋದಾಗ, ದೀಪಗಳು ಸ್ವತಃ ಬೆಳಗುತ್ತವೆ. ಹೀಗೆ ಬರೆದ ದೃಶ್ಯವನ್ನು ಕಾರಣಾಂತರಗಳಿಂದ ಬದಲಾಯಿಸಬೇಕಾಯಿತು ಎಂದರು.

    ಅರಣ್ಯದಲ್ಲಿ ಕಾರ್​ನಿಂದ ಇಳಿದವರನ್ನು ಅಟ್ಟಾಡಿಸಿದ ಕಾಡಾನೆ: ಬೆಚ್ಚಿಬೀಳಿಸುವ ದೃಶ್ಯದ ವಿಡಿಯೋ ವೈರಲ್‌..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts