More

    ದತ್ತಪೀಠವನ್ನು ಹಿಂದುಗಳಿಗೆ ಹಸ್ತಾಂತರಿಸಿ

    ಚಿಕ್ಕಮಗಳೂರು: ದತ್ತಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಹಸ್ತಾಂತರಿಸಬೇಕು. ಅಲ್ಲಿರುವ ಅನಧಿಕೃತ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ದತ್ತಪೀಠದ ದಾಖಲೆಗಳ ಪ್ರಕಾರ ಹಿಂದುಗಳದ್ದಾಗಿದ್ದು, ಕೋರ್ಟ್ ಕೂಡ ಸಹಮತ ವ್ಯಕ್ತಪಡಿಸಿದೆ. ಈ ವಿಚಾರವನ್ನು ಪರಿಶೀಲಿಸಿರುವ ಆಯೋಗಗಳು ಸಹ ಹಿಂದುಗಳ ಪರ ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ ಇದನ್ನೆಲ್ಲ ಧಿಕ್ಕರಿಸಿ ಖಾದ್ರಿ ಕುಟುಂಬ ಅನಧಿಕೃವಾಗಿ ಈ ಜಾಗದಲ್ಲಿ ವಾಸಿಸುತ್ತಿದೆ ಎಂದು ದೂರಿದರು.
    ದತ್ತಪೀಠಕ್ಕೆ ಬರುವ ಹಿಂದು ಭಕ್ತಾದಿಗಳಿಗೆ ಅವಹೇಳನ ಮಾಡುವುದು, ಪೀಠದ ಸುತ್ತಮುತ್ತ ಮಾಂಸಾಹಾರಕ್ಕೆ ಪ್ರೇರಣೆ ನೀಡುವುದು, ಯಾತ್ರಿಗಳಲ್ಲಿ ಕೋಮುವಾದ ತುಂಬುವುದು ಮುಂತಾದ ಸಮಾಜ ಘಾತುಕ ಕೃತ್ಯಗಳನ್ನು ಮಾಡುತ್ತಿರುವವರನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಬೇಕು ಎಂದು ಮನವಿ ಮಾಡಿದರು.
    ಸೇನೆ ವಿಭಾಗೀಯ ಅಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ದುರ್ಗಾ ಸೇನೆ ಜಿಲ್ಲಾಧ್ಯಕ್ಷೆ ನವೀನಾ, ತಾಲೂಕು ಅಧ್ಯಕ್ಷ ನಂದನ್, ಪ್ರಸನ್ನ, ಪವನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts