ನಾಲತವಾಡ: ಗಣೇಶನ ನಿರ್ಗಮನದ ನಂತರ ಮಳೆ ಬೆಳೆಗೆ ಕಳೆ ಕೊಡುವ ಜೋಕುಮಾರನ ಆಗಮನ ಶೀಘ್ರವೇ ಗ್ರಾಮೀಣ ಭಾಗದಲ್ಲಿ ಆಗಮನವಾಗುತ್ತೀರುವ ಹಿನ್ನಲೆಯಲ್ಲಿ ಸಮೀಪ ಬಂಗಾರಗುಂಡ ಗ್ರಾಮದ ಹನಮಂತ್ರಾಯ ಕುಂಬಾರ ಎಂಬುವರು ಜೋಕುಮಾರನ ಮೂರ್ತಿಯನ್ನು ಸಿದ್ದಪಡಿಸಿದ್ದು ಗಮನ ಸೆಳೆಯುತ್ತಿದೆ.
ಗಣೇಶ ಚತುರ್ಥಿಯ ನಂತರ ಪ್ರತಿ ಹಳ್ಳಿಗೂ ಸುಮಾರು 7 ದಿನಗಳ ಕಾಲ ಮನೆ ಮನೆಗೆ ತೆರಳುವ ಜೋಕುಮಾರನ ಮೂರ್ತಿಯನ್ನು ಸಿದ್ದಪಡಿಸುವಲ್ಲಿ ಹನಮಂತ್ರಾಯ ಕುಂಬಾರ ಖ್ಯಾತಿ ಪಡೆದಿದ್ದು ಯಾವದೇ ಆಶೆ ಆಮಿಷದ ವ್ಯಕ್ತಿಯಲ್ಲ ಧಾರ್ಮೀಕ ಕಾರ್ಯಕ್ರಮಕ್ಕೆ ಪದ್ದತಿಯಂತೆ ಜೋಕುಮಾರನನ್ನು ಮಣ್ಣಿನಿಂದ ತಯಾರಿಸಿ ಕೊಡುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.