ನಾಲತವಾಡ: ಪಟ್ಟಣದ ಪ್ರಮುಖ ಮಾರುಕಟ್ಟೆ ಗಣೇಶ ವೃತ್ತದಲ್ಲಿ ಅಯ್ಯಪ್ಪಸ್ವಾಮಿ 27ನೇ ಮಹಾಪೂಜೆ ಕಾರ್ಯಕ್ರಮ ಬುಧವಾರ ನೆರವೇರಿತು.
ಸ್ಥಳೀಯ ಬಸವರಾಜ ಗುರುಸ್ವಾಮಿ ಹಾಗೂ ಸೌಥ್ ಸೆಂಟ್ರಲ್ ರೈಲ್ವೆ ವಿಜಯಪುರದ ಪಿ.ಟಿ. ರಾಜೇಶ ಪಿಳ್ಳೆ ಸಮ್ಮುಖದಲ್ಲಿ ಜರುಗಿದ ಮಹಾಪೂಜೆ ಕಾರ್ಯಕ್ರಮದಲ್ಲಿ ವಿವಿಧ ಗೀತೆ ಭಜನೆಗಳೊಂದಿಗೆ ಗುರುಸ್ವಾಮಿಗಳಾದ ಗಿರಿಯಪ್ಪ ಗುರುಸ್ವಾಮಿ, ಮುದ್ದೇಬಿಹಾಳದ ಚಂದ್ರು, ಬಾಗೇವಾಡಿಯ ಜಾಲಹಳ್ಳಿ ಗುರುಸ್ವಾಮಿ, ಶಿವು ಗುರುಸ್ವಾಮಿ, ಪಟ್ಟಣದ ಹಿರಿಯ ಗುರುಸ್ವಾಮಿ ಮಲ್ಲು ಗಂಗನಗೌಡರ(ಮಣಿಕಂಠ) ನೇತೃತ್ವದಲ್ಲಿ ಹಾಗೂ ಮುದ್ದೇಬಿಹಾಳ, ವಿಜಯಪುರ, ಯರಗಲ್, ಜಾಲಹಳ್ಳಿ, ಮಿಣಜಗಿ, ಕೋಡೇಕಲ್, ನಾರಾಯಣಪುರ, ಬಂಗಾರಗುಂಡ ಸ್ವಾಮಿಗಳ ಉಪಸ್ಥಿತಿಯಲ್ಲಿ ಜರುಗಿತು.
ಪಟ್ಟಣದ ಗ್ರಾಮದೇವತೆ ಗುಡಿಯಿಂದ ಜ್ಯೋತಿ ಆಗಮನ ಗಮನ ಸೆಳೆಯಿತು. ಅಯ್ಯಪ್ಪಸ್ವಾಮಿಗೆ ಮಹಾಅಭಿಷೇಕ ಹಾಗೂ 18 ಮೆಟ್ಟಿಲುಗಳ ಪಡಿ ಪೂಜೆ ಮಹಾಮಂಗಳಾರತಿ ನೆರವೇರಿತು.
ಸತತ 18ನೇ ವರ್ಷದ ಶಬರಿಯಾತ್ರೆ ಕೈಗೊಳ್ಳುತ್ತಿರುವ ಶೀಲವಂತ ಗುರುಸ್ವಾಮಿ, ಶಂಕ್ರು ಗಾದಿ ಗುರುಸ್ವಾಮಿಗಳಿಗೆ ತೆಂಗಿನ ಸಸಿಗಳನ್ನು ನೀಡಿ ಸನ್ಮಾನಿಸಲಾಯಿತು.