More

    ಕೇರಳದಲ್ಲಿ ಪ್ಯಾಲೆಸ್ತೀನ್​ ಪರ ನಡೆದ ಸಮಾವೇಶ ಉದ್ದೇಶಿಸಿ ಹಮಾಸ್​ ನಾಯಕ ಭಾಷಣ: ವಿವಾದ ಸ್ಫೋಟ

    ತಿರುವನಂತಪುರಂ: ಅಕ್ಟೋಬರ್​ 7 ರಂದು ಇಸ್ರೇಲ್​ ಮೇಲೆ ರಾಕೆಟ್​​ ದಾಳಿ ಮಾಡಿ ಯುದ್ಧಕ್ಕೆ ಮುನ್ನುಡಿ ಬರೆದ ಪ್ಯಾಲೆಸ್ತೀನ್​​ನ ಹಮಾಸ್​ ಉಗ್ರ ಸಂಘಟನೆಯ ನಾಯಕರೊಬ್ಬರು ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ “ಸಾಲಿಡಾರಿಟಿ ಯೂತ್​ ಮೂವ್ಮೆಂಟ್​” ಆಯೋಜಿಸಿದ್ದ ಸಮಾವೇಶದಲ್ಲಿ ವರ್ಚುವಲ್​ ಆಗಿ ಪಾಲ್ಗೊಂಡು ಮಾತನಾಡಿರುವುದು ವಿವಾದದ ಬಿರುಗಾಳಿ ಎಬ್ಬಿಸಿದೆ.

    ಈ ಸಾಲಿಡಾರಿಟಿ ಯೂತ್​ ಮೂವ್ಮೆಂಟ್​, ಜಮಾತ್​​ ಇ ಇಸ್ಲಾಮಿ ಸಂಘಟನೆಯ ಯುವ ಸಂಘಟನಾ ವಿಭಾಗವಾಗಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹಮಾಸ್​ ನಾಯಕ ಖಲೀದ್​ ಮಸ್ಹಾಲ್​, ಯುವಕರನ್ನು ಉದ್ದೇಶಿಸಿ ಮಾತನಾಡಿದ್ದು, ಇದೀಗ ವಿವಾದಕ್ಕೆ ಗುರಿಯಾಗಿದೆ.

    ಖಲೀದ್​ ಮಸ್ಹಾಲ್ ವರ್ಚುವಲ್​ ಆಗಿ​ ಮಾತನಾಡಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್​ ಖಂಡಿಸಿದ್ದಾರೆ. ಅಲ್ಲದೆ, ಕೇರಳ ಪೊಲೀಸರಿಗೆ ಪ್ರಶ್ನೆ ಮಾಡಿರುವ ಸುರೇಂದ್ರನ್, ಕಾರ್ಯಕ್ರಮ ಆಯೋಜಕರ ವಿರುದ್ಧ​ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

    ಮಲಪ್ಪುರಂನಲ್ಲಿ ನಡೆದ ಐಕ್ಯತೆ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಸ್ಹಾಲ್​ ಅವರ ವಾಸ್ತವ ಭಾಷಣವು ಆತಂಕಕಾರಿಯಾಗಿದೆ. ಪಿಣರಾಯಿ ವಿಜಯನ್​ ಅವರ ಕೇರಳ ಪೊಲೀಸರು ಎಲ್ಲಿದ್ದಾರೆ? ಪ್ಯಾಲೆಸ್ತೀನ್​ ಉಳಿಸಿ ಎಂಬ ಸೋಗಿನಲ್ಲಿ ಉಗ್ರ ಸಂಘಟನೆ ಹಮಾಸ್​ ಅನ್ನು ವೈಭವೀಕರಿಸುತ್ತಿದ್ದಾರೆ ಮತ್ತು ಅವರ ನಾಯಕನ್ನು ಯೋಧನೆಂದು ಬಿಂಬಿಸುತ್ತಿದ್ದಾರೆ. ನಿಜಕ್ಕೂ ಇದು ಸ್ವೀಕಾರ್ವಲ್ಲ ಎಂದು ಸುರೇಂದ್ರನ್​ ಎಕ್ಸ್​ ಮೂಲಕ ಖಂಡನೆ ಮಾಡಿದ್ದಾರೆ.

    ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಲೋಕಸಭಾ ಸಂಸದ ಶಶಿ ತರೂರ್​ ಅವರನ್ನು ಕೇರಳ ಬಿಜೆಪಿ ಘಟಕ ಟೀಕಿಸಿದೆ. ಪ್ಯಾಲೆಸ್ತೀನ್​ ಬೆಂಬಲಿಸಿರುವ ಯೂನಿಯನ್​ ಮುಸ್ಲಿಂ ಲೀಗ್​ ಸಮಾವೇಶದಲ್ಲಿ ತರೂರ್​ ಭಾಗವಹಿಸಿದ್ದಕ್ಕೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

    ಇಸ್ರೇಲ್​ ಜತೆಗಿನ ಯುದ್ಧದಲ್ಲಿ ಹಾನಿಗೊಳಗಾದ ಪ್ಯಾಲೆಸ್ತೀನ್ ಜನರ ಪರ ಸಾವಿರಾರು ಐಯುಎಂಎಲ್ ಬೆಂಬಲಿಗರು ಕೋಯಿಕ್ಕೋಡ್‌ನ ಬೀದಿಗಿಳಿದು ಬೆಂಬಲ ಸೂಚಿಸಿದ ಒಂದು ದಿನದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಹಮಾಸ್​-ಇಸ್ರೇಲ್​ ಸಂಘರ್ಷವನ್ನು ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. (ಏಜೆನ್ಸೀಸ್​)

    ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಬೇಡಿಕೆ; ಸಿಎಂ ಜತೆ ಚರ್ಚಿಸಲಾಗುವುದು: ಎಂ.ಬಿ. ಪಾಟೀಲ

    ಭಾರತದ ಮಾವು ರಫ್ತು ಶೇ.19ಕ್ಕೆ ಏರಿಕೆ: ಅಮೆರಿಕಾಗೇ ಹೆಚ್ಚು ಉತ್ಪನ್ನ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts