– ಬಿಜೆಪಿ ಕಾಂಗ್ರೆಸ್ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಬೇಡಿ
ಕಲಬುರಗಿ: ಬಿಜೆಪಿ, ಕಾಂಗ್ರೆಸ್ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಜೆಡಿಎಸ್ಗೆ ಮತ ಹಾಕಿ ಆಶೀರ್ವಾದ ಮಾಡಿ. ನಿಮ್ಮನ್ನ ನಂಬಿದ್ದೇನೆ, ರೈತಪರ ಸರ್ಕಾರ ತರಲು ಹೋರಾಟ ಮಾಡ್ತಿದ್ದೇನೆಂದು ಸಮಾವೇಶದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಯಡ್ರಾಮಿ ಪಟ್ಟಣದಲ್ಲಿ ಜೆಡಿಎಸ್ ಬೃಹತ್ ಸ್ವಾಭಿಮಾನಿ ಸಮಾವೇಶ ವೇಳೆ ಮಾತನಾಡಿದ ಅವರು, ಕನಿಷ್ಠ 30 ಸಾವಿರ ಮತಗಳಿಂದ ದೊಡ್ಡಪ್ಪಗೌಡ ಪಾಟೀಲ್ ಅವರನ್ನು ವಿಧಾನಸಭೆಗೆ ಕಳುಹಿಸಬೇಕು. ಜೇವರ್ಗಿ ತಾಲ್ಲೂಕಿನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ 75 ಲಕ್ಷ ರೂ ಪರಿಹಾರ ನೀಡಿದ್ದೆ. ಈ ವಿಚಾರ ಜೇವರ್ಗಿ ಮತದಾರರು ಮರೆಯಬಾರದು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ನನಗೆ ಸ್ವತಂತ್ರ ಅಧಿಕಾರ ಕೊಡಿ, ಪ್ರತಿಯೊಬ್ಬರೂ ನೆಮ್ಮದಿಯಂದ ಬದುಕಲು ಪಂಚರತ್ನ ಯೋಜನೆಗಳನ್ನ ಜಾರಿಗೆ ತರುತ್ತೇನೆ. ದೊಡ್ಡಪ್ಪಗೌಡ ಪಾಟೀಲ್ ಶಾಸಕರಾದರೇ ಬೆಂಗಳೂರಲ್ಲಿ ವಾಸ ಮಾಡಲ್ಲ. ದೊಡ್ಡಪ್ಪಗೌಡ ನಿಮ್ಮೊಟ್ಟಿಗೆ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತ ಕ್ಷೇತ್ರದಲ್ಲೇ ಇರುತ್ತಾರೆ. ಜಿಲ್ಲೆ, ಜೇವರ್ಗಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಮಾಡ್ತಾರೆ. ಅದೇ ಕಾಂಗ್ರೆಸ್ ಅಭ್ಯರ್ಥಿಗೆ ಆಯ್ಕೆ ಮಾಡಿದ್ರೆ ಚುನಾವಣೆ ನಂತರ ಟಾಟಾ ಬೈ ಬೈ ಮಾಡಿ ಬೆಂಗಳೂರಿಗೆ ಹೋಗ್ತಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ನಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲ ಬಳಕೆ!
ಹಿಂದೇ ದೇವೆಗೌಡರು ಸಿಎಂ ಆಗಿದ್ದಾಗ ಜೇವರ್ಗಿ ಭಾಗದಲ್ಲಿ ಅನೇಕ ನೀರಾವರಿ ಯೋಜನೆ ಜಾರಿ ಮಾಡಿದ್ದರು. ಬಿಜೆಪಿ ಕಾಂಗ್ರೆಸ್ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಪಂಚರತ್ನ ಯೋಜನೆಗಳು ಬಡಜನರ ಬದುಕಿಗೆ ಹೊಸ ಅಧ್ಯಾಯ ಪ್ರಾರಂಭ ಮಾಡಲಾಗುತ್ತದೆ. ಕಾಂಗ್ರೆಸ್, ಬಿಜೆಪಿ ಮಾತುಗಳಿಗೆ ಮರುಳಾಗಬೇಡಿ. ಜೇವರ್ಗಿ ಕ್ಷೇತ್ರದ ಮತದಾರರಲ್ಲಿ ಎಚ್ಡಿಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆಜಾನ್ ವೇಳೆ ಭಾಷಣ ನಿಲ್ಲಿಸಿ ಗೌರವ ತೋರಿದ ರಾಹುಲ್ ಗಾಂಧಿ
ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಜೆಡಿಎಸ್ಗೆ ಮತ ಹಾಕಿ ಆಶೀರ್ವಾದ ಮಾಡಿ. ನಿಮ್ಮನ್ನ ನಂಬಿದ್ದೇನೆ, ರೈತಪರ ಸರ್ಕಾರ ತರಲು ಹೋರಾಟ ಮಾಡುತ್ತಿದ್ದೇನೆ. ದೊಡ್ಡಪ್ಪಗೌಡ ರನ್ನ ಗೆಲ್ಲಿಸುವ ಮೂಲಕ ಜೆಡಿಎಸ್ಗೆ ಆಶೀರ್ವಾದ ಮಾಡಿ ಎಂದು ಮತದಾರರ ಬಳಿ ಕೇಳಿ ಕೊಂಡಿದ್ದಾರೆ.