More

    ಗೋಮೂತ್ರ, ಗೋವಿನ ಸಗಣಿಯಿಂದ ಗುಣವಾಗುವ ಮಾರಕ ವೈರಸ್​ ಕೊರೊನಾ; ಅಸ್ಸಾಂ ಬಿಜೆಪಿ ಶಾಸಕಿ ಸುಮನ್​ ಹರಿಪ್ರಿಯಾ

    ಗುವಾಹಟಿ: ಗೋಮೂತ್ರ ಮತ್ತು ಗೋವಿನ ಸಗಣಿಯಿಂದ ಮಾರಕ ವೈರಸ್​ ಕೊರೊನಾ ಗುಣವಾಗುತ್ತದೆ ಎಂದು ಅಸ್ಸಾಂನ ಅಧಿವೇಶನದಲ್ಲಿ ಬಿಜೆಪಿ ಶಾಸಕಿ ಸುಮನ್​ ಹರಿಪ್ರಿಯಾ ಹೇಳಿದ್ದಾರೆ.

    ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಕೊರೊನಾ ವೈರಸ್​ ಬಗ್ಗೆ ಮಾತನಾಡಿದ ಶಾಸಕಿ ಸುಮನ್​, ಗೋಮೂತ್ರ ಮತ್ತು ಗೋವಿನ ಸಗಣಿಗೆ ಕ್ಯಾನ್ಸರ್​ ಗುಣಪಡಿಸುವ ಶಕ್ತಿ ಇದೆ ಎಂದರು.

    ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಣೆ ಮಾಡುತ್ತಿರುವ ವಿಷಯದ ಬಗ್ಗೆ ಅಧಿವೇಶನದಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ನಮಗೆ ಗೊತ್ತಿರುವಂತೆ ಗೋಮೂತ್ರ ಸಿಂಪಡಿಸುವ ಮೂಲಕ ಸ್ಥಳವನ್ನು ಪರಿಶುದ್ಧಗೊಳಿಸುತ್ತೇವೆ. ಅದೇ ರೀತಿ ಗೋಮೂತ್ರದಿಂದ ಕೊರೊನಾ ವೈರಸ್​ನ್ನು ಗುಣ ಪಡಿಸಬಹುದು ಎಂದರು.

    ಭಾರತದಲ್ಲಿ ಆಕಳನ್ನು ಪೂಜಿಸುತ್ತೇವೆ. ಅಲ್ಲದೆ ಗೋಮೂತ್ರವನ್ನು ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದಕ್ಕೆ ಭಾರತ ಸಂಸ್ಕೃತಿಯಲ್ಲಿ ಸುದೀರ್ಘವಾದ ಇತಿಹಾಸವಿದೆ.

    ಸಗಣಿಯನ್ನು ಕೂಡ ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಗಳಿಗಾಗಿ, ಔಷಧಕ್ಕಾಗಿ, ಗೋಬರ್​ ಗ್ಯಾಸ್​ನ ಮೂಲಕ ಇಂಧನಕ್ಕಾಗಿ ಬಳಸಲಾಗುತ್ತದೆ ಎಂದರು.

    ಬಾಂಗ್ಲಾದೇಶದ ಆರ್ಥಿಕತೆ ಬಲಗೊಂಡಿದ್ದಕ್ಕೆ ಭಾರತದಿಂದ ಜಾನುವಾರುಗಳ ಕಳ್ಳ ಸಾಗಣೆ ಮಾಡಿಕೊಂಡದ್ದೇ ಕಾರಣ. ಈಗ ಬಾಂಗ್ಲಾ ದೇಶವು ವಿಶ್ವದಲ್ಲಿ ದನದ ಮಾಂಸ ಮಾರಾಟಕ್ಕೆ ಎರಡನೇ ಸ್ಥಾನ ಪಡೆದಿದೆ. ಈ ಎಲ್ಲ ಜಾನುವಾರುಗಳು ಭಾರತ ದೇಶದವು. ಈ ಮೊದಲು ಇದ್ದ ಕಾಂಗ್ರೆಸ್​ ಸರ್ಕಾರ ಜಾನುವಾರುಗಳ ಕಳ್ಳ ಸಾಗಣೆ ನಿಯಂತ್ರಣಕ್ಕೆ ಯಾವ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಬೇಸರಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts