More

    ಶಿಕ್ಷಕಿ ಆಶಾಗೆ ಗುರು ಪ್ರತಿಭಾ ಪುರಸ್ಕಾರ

    ಯಲ್ಲಾಪುರ: ತಾಲೂಕಿನ ಉಮ್ಮಚಗಿ ಸಮೀಪದ ಹಲಸಿನಕೊಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕಿ ಆಶಾ ಶೆಟ್ಟಿ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ನೀಡುವ ಗುರು ಪ್ರತಿಭಾ ಪುರಸ್ಕಾರ ದೊರೆತಿದೆ. ಆಶಾ ಶೆಟ್ಟಿ ಅವರು ಪರಿಷತ್​ನಡಿ ಮಕ್ಕಳ ಸಾಹಿತಿ ಶಿಕ್ಷಕರ ವೇದಿಕೆ ಮುಖ್ಯಸ್ಥರಾಗಿ ಸಾವಿರಾರು ಶಿಕ್ಷಕರು, ವಿದ್ಯಾರ್ಥಿಗಳಿಗೆ ವಿನೂತನ ಆನ್​ಲೈನ್ ಸ್ಪರ್ಧೆ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ. ಹಲವು ಉತ್ಸಾಹಿ ಶಿಕ್ಷಕರಿಗೆ ಅವಕಾಶ, ಮಾರ್ಗದರ್ಶನ ನೀಡುತ್ತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ ಪುರಸ್ಕಾರ ನೀಡಲಾಗಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ರಾಜ್ಯ ಶೈಕ್ಷಣಿಕ ಸಮ್ಮೇಳನದಲ್ಲಿ ಆಶಾ ಶೆಟ್ಟಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts