More

    ರಾಮ ಮಂದಿರ ತೀರ್ಪು ಸ್ವಾಗತಾರ್ಹ

    ಗುಳೇದಗುಡ್ಡ: ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಸ್ವಾಗತಾರ್ಹ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ತಿಳಿಸಿದ್ದಾರೆ.

    ರಾಷ್ಟ್ರೀಯ ನಾಯಕರಾದ ಲಾಲ್‌ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣಸಿಂಗ್, ಸಾದ್ವಿ ಉಮಾ ಭಾರತಿ ಅವರನ್ನೊಳಗೊಂಡು ಅನೇಕರನ್ನು ಆರೋಪಿಗಳನ್ನಾಗಿ ವಿಶೇಷ ನ್ಯಾಯಾಲಯಕ್ಕೆ ಆಗಿನ ಕಾಂಗ್ರೆಸ್ ಕೇಂದ್ರ ಸರ್ಕಾರ ಆರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯ 28 ವರ್ಷ ಸುಧೀರ್ಘ ವಿಚಾರಣೆ ನಂತರ ಬುಧವಾರ ಎಲ್ಲರನ್ನು ನಿರ್ದೋಷಿಗಳನ್ನಾಗಿ ತೀರ್ಪು ನೀಡಿ ಪ್ರಕರಣವನ್ನು ಖುಲಾಸೆ ಮಾಡಿದೆ. ನಮ್ಮ ನಾಯಕರು ಯಾವುದೇ ಸಂದರ್ಭಗಳಲ್ಲಿ ತಮ್ಮ ಆದರ್ಶಗಳನ್ನೂ ಬಿಟ್ಟಿಲ್ಲ ಎಂಬುದನ್ನು ಜಗತ್ತಿಗೆ ಈ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts