More

    ಮೊಮ್ಮಗಳು ಬ್ಯಾಂಕಿಗೆ ಹಾಜರು; ಅಜ್ಜಿಯ ಹಣೆ ಮೇಲೆ ಬೆವರು!

    ಆಯನೂರು: ತನ್ನ ಮೊಮ್ಮಗಳು ಮೃತಪಟ್ಟಿದ್ದು ಅವಳ ಉಳಿತಾಯ ಖಾತೆಯಲ್ಲಿ ಇರುವ ಹಣವನ್ನು ತನಗೆ ಕೊಡಬೇಕು ಎಂದು ಬ್ಯಾಂಕ್ ಅಧಿಕಾರಿಗಳನ್ನು ಪೀಡಿಸುತ್ತಿದ್ದ ಅಜ್ಜಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ.

    ಇಲ್ಲಿನ ಕೆನರಾ ಬ್ಯಾಂಕ್ ಶಾಖೆಗೆ ಇತ್ತೀಚೆಗೆ ಬಂದಿದ್ದ ಅಜ್ಜಿ, ‘‘ನನ್ನ ಮೊಮ್ಮಗಳು ತೀರಿಕೊಂಡಿದ್ದಾಳೆ. ಅವಳ ಖಾತೆಯಲ್ಲಿನ ಹಣವನ್ನು ಕಷ್ಟದಲ್ಲಿರುವ ನನಗೆ ಕೊಡಿ. ಆ ಖಾತೆಗೆ ನಾಮಿನಿಯಾಗಿರುವ ನನ್ನ ಮಗನ ಆಕ್ಷೇಪವೂ ಇದಕ್ಕೆ ಇಲ್ಲ’’ ಎಂದು ಹೇಳಿದ್ದಳು.

    ಹಾಗೆ ಹಣ ಕೊಡುವುದಕ್ಕೆ ಬರುವುದಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಎಷ್ಟೇ ಹೇಳಿದರೂ ಆಕೆ ಒಪ್ಪಿರಲಿಲ್ಲ. ಮೊಮ್ಮಗಳ ಮರಣ ಪ್ರಮಾಣಪತ್ರವನ್ನೂ ತಂದು ತೋರಿಸಿದ್ದಳು. ಆಗಲೂ ಬ್ಯಾಂಕಿನವರು ಒಪ್ಪದಿದ್ದಾಗ ಅಜ್ಜಿ ಆತ್ಮಹತ್ಯೆಯ ನಾಟಕವನ್ನೂ ಆಡಿದ್ದಳು.

    ಇದನ್ನೂ ಓದಿ   ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಏನಾಯ್ತು ನೋಡಿ…

    ಆದರೀಗ ಅಜ್ಜಿಯ ನೈಜ ಬಣ್ಣ ಬಯಲಾಗಿದೆ. ಆಕೆಯ ಮೊಮ್ಮಗಳು ತನ್ನ ತಾಯಿಯ ಜತೆ ಮಂಗಳವಾರ ಬ್ಯಾಂಕಿಗೆ ಹಾಜರಾಗಿದ್ದಾಳೆ. ಮೊಮ್ಮಗಳ ಖಾತೆಯಲ್ಲಿನ ಹಣ ಪಡೆಯಲು ಮಂಗಳವಾರ ಅಜ್ಜಿ ಬ್ಯಾಂಕಿಗೆ ಬಂದಿದ್ದ ಸಂದರ್ಭದಲ್ಲೇ ಇವರಿಬ್ಬರೂ ಹಾಜರಾಗಿ ಅಜ್ಜಿಯ ಬಣ್ಣ ಬಯಲು ಮಾಡಿದ್ದಾರೆ.

    ತನ್ನ ಖಾತೆಯಲ್ಲಿರುವ ಹಣವನ್ನು ಅಜ್ಜಿಗೆ ಕೊಡಬೇಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿರುವ ಮೊಮ್ಮಗಳು, ಜೀವಂತ ಇರುವಾಗಲೇ ಮರಣ ಪ್ರಮಾಣ ಪತ್ರ ನೀಡಿದವರ ವಿರುದ್ಧ ದೂರು ದಾಖಲು ಮಾಡುತ್ತೇನೆ ಎಂದೂ ಎಚ್ಚರಿಸಿದ್ದಾಳೆ.

    ಈ ಸಮಸ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. 10ನೇ ತರಗತಿವರೆಗೆ ಅಜ್ಜಿಯ ಜತೆಗಿದ್ದ ಮೊಮ್ಮಗಳಿಗೆ ಬಾಲ್ಯವಿವಾಹ ಮಾಡಲು ಅಜ್ಜಿ ಯತ್ನಿಸಿದ್ದಳು ಎನ್ನಲಾಗಿದೆ. ಆದ್ದರಿಂದ ಮೊಮ್ಮಗಳು ಅಜ್ಜಿಯನ್ನು ಬಿಟ್ಟು ಹೋಗಿ ಬೇರೆ ಊರಿನಲ್ಲಿದ್ದ ಅಮ್ಮನ ಜತೆಗೆ ನೆಲೆಸಿದ್ದಳು. ಇದು ಅಜ್ಜಿಯ ಸಿಟ್ಟಿಗೆ ಕಾರಣ ಎನ್ನಲಾಗಿದೆ.

    VIDEO| ನಿನ್ನೆ ದೇವೇಗೌಡರ ಜತೆ ಡಿಕೆಶಿ ಭೋಜನ; ಇವತ್ತು ಎಚ್‌ಡಿಕೆ ಜತೆ ಡಿಕೆ ಸುರೇಶ್ ಕ್ಷೇತ್ರ ಪ್ರವಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts