More

    ವೃದ್ದಾಶ್ರಮದಲ್ಲಿ ಗೌರಿ, ಗಣೇಶ ಹಬ್ಬ ಆಚರಣೆ

    ಮಂಡ್ಯ: ಪ್ರಸ್ತುತ ದಿನಗಳಲ್ಲಿ ಹಿರಿಯ ಜೀವಗಳೊಂದಿಗೆ ಬದುಕುವ ಮಾನವೀಯತೆ ಮರೆಯಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಬೇಸರ ವ್ಯಕ್ತಪಡಿಸಿದರು.
    ನಗರದ ಸೇವಾಕಿರಣ ವೃದ್ದಶ್ರಾಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಯೋವೃದ್ಧರಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮನ್ನು ಹೆತ್ತು-ಪೋಷಿಸಿ ಬೆಳೆಸಿದ ತಂದೆ-ತಾಯಿಯನ್ನು ಕಡೆಗಣಿಸುವ ಮನಸ್ಥಿತಿ ಹೆಚ್ಚಾಗುತ್ತಿದೆ. ಕೌಟುಂಬಿಕ ಮನಸ್ಥಾಪದಿಂದ ಹಿರಿಯ ಜೀವಗಳನ್ನು ಹೊರಹಾಕುವ ಸಣ್ಣತನಗಳು ದೂರವಾಗಬೇಕಿದೆ.
    ವೃದ್ಧಾಶ್ರಮ, ಅನಾಥಶ್ರಮಗಳಲ್ಲಿನ ಹಿರಿಯ ಚೇತನಗಳು ಹಬ್ಬ-ಹರಿದಿನಗಳಲ್ಲಿ ಎಲ್ಲರಂತೆ ಸಂತೋಷದಿಂದ ಇರಲು ಇಂತಹ ಕಾರ್ಯಕ್ರಮಗಳು ಪೇರಣೆ ನೀಡುತ್ತವೆ. ಹಿರಿಯ ಜೀವಗಳೊಂದಿಗೆ ನಾವು-ನೀವು ಕೆಲಕಾಲ ಸಂಭ್ರಮಿಸಿ, ಪೋಷಿಸಿದರೆ ಅವರಲ್ಲಿ ಮತ್ತಷ್ಟು ಜೀವಕಳೆ ಹೆಚ್ಚಾಗುತ್ತದೆ ಎಂದರು.
    ವೇದಿಕೆ ಅಧ್ಯಕ್ಷ ಪೋತೇರ ಮಹದೇವು, ಕಾನೂನು ಪ್ರಾಧ್ಯಾಪಕ ಕೆ.ಎಸ್.ಜಯಕುಮಾರ್, ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ದೇವರಾಜು ಕೊಪ್ಪ, ಸೇವಾಕಿರಣ ವೃದ್ಧಾಶ್ರಮದ ರಾಜಣ್ಣ, ಕರವೇ ತಾ ಅಧ್ಯಕ್ಷ ಮದ್ದೂರು ಅಶೋಕ್, ಸಿದ್ದಪ್ಪ, ಶಂಭೂಗೌಡ, ಸುಧಾ ಆರಾಧ್ಯ, ಶಿವಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts