ಗೊರೇಬಾಳ: ಮಳೆಯಿಂದಾಗಿ ಶಾಂತಿನಗರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ ಒಂದು ಮತ್ತು ಮೂರನೆಯ ಅಂಗನವಾಡಿ ಕೇಂದ್ರಗಳಲ್ಲಿ ನೀರು ನಿಂತಿತ್ತು. ನೀರಿನಲ್ಲಿ ದವಸ-ಧಾನ್ಯಗಳು ನೆನೆದವು.
ಶಾಲೆಯ ಆವರಣದಲ್ಲಿನ ನೀರು ಹೊರಹೋಗಲು ಪೈಪ್ ಅಳವಡಿಸಲಾಗಿದೆ. ಆದರೆ, ಪೈಪ್ನಲ್ಲಿ ಕಸ ಇದ್ದ ಹಿನ್ನೆಲೆಯಲ್ಲಿ ಸಮಸ್ಯೆಯಾಯಾಯಿತು. ಕಸ ತೆಗೆಯಲು ಗ್ರಾಮಸ್ಥರು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆವರಣದ ಒಂದೆಡೆ ತಗ್ಗು ಇದ್ದು, ಸಮತಟ್ಟು ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.