More

    ಮತ್ತಷ್ಟು ಸೇವೆ ಕೈಗೊಳ್ಳಲು ಪ್ರೇರಣೆ

    ಗೊರೇಬಾಳ: ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದಲ್ಲಿ ನಡೆದ ಗಣೇಶ ಗಾಯತ್ರಿ ರಥೋತ್ಸವ ಹಾಗೂ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಡಾ.ಸಿದ್ದರಾಮೇಶ್ವರ ಶರಣರ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ ಜನಸೇವಾ ಕಲ್ಯಾಣ ಟ್ರಸ್ಟ್‌ವತಿಯಿಂದ ಡಾ.ಕೆ..ದೊಡ್ಡ ಬಸವರಾಜ್ ಅವರಿಗೆ ವೈದ್ಯಭೂಷಣ ಹಾಗೂ ಡಾ.ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಮಾನ್ವಿ ಕಲ್ಮಠದ ಶ್ರೀ ಪಂಡಿತಾರಾದ್ಯ ಶಿವಾಚಾರ್ಯರು ಮಾತನಾಡಿ, ಡಾ.ದೊಡ್ಡ ಬಸವ ಅವರು ಬಡರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಡಾ ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ವಿಶೇಷ ಪ್ರಶಸ್ತಿ ನೀಡುವ ಮೂಲಕ ಅವರ ವೃತ್ತಿಯನ್ನು ಗೌರವಿಸಲಾಗಿದೆ. ಸಿಂಧನೂರು ಭಾಗದಲ್ಲಿನ ಸಮಾಜ ಸೇವೆ ಕಾರ್ಯಗಳು ಗಮನಾರ್ಹ. ಇವು ಮತ್ತಷ್ಟು ಸೇವೆ ಮಾಡಲು ಪ್ರೇರಣೆ ಎಂದರು.

    ಶ್ರೀ ಅಭಿನವ ಗುರುಬಸವ ಮಹಾಸ್ವಾಮಿ, ಶ್ರೀ ಡಾ.ಸಿದ್ದರಾಮೇಶ್ವರ ಶರಣರು, ಶ್ರೀ ಸದಾನಂದ ತಾತನವರು, ಶರಣು ಪಾ.ಹಿರೇಮಠ, ಪ್ರಮುಖರಾದ ಕೆ.ವಿರೂಪಾಕ್ಷಪ್ಪ, ಪ್ರತಾಪ ಗೌಡ ಪಾಟೀಲ್, ಅಮರೇಗೌಡ ವಿರುಪಾಪುರ, ಎಂ.ಅಮರೇಗೌಡ, ವೀರೇಶ ಗೌಡ, ಮಲ್ಲಿನಾಥ ಶಾಸ್ತ್ರಿ, ಡಾ.ಶರಣಬಸವರಾಜ್ ದೇವರಡ್ಡಿ, ವೀರೇಶ ಯಡಿಯೂರ ಮಠ, ಡಾ.ಅಭಿನೇತ್ರಿ ಪಾಟೀಲ್, ಸಿದ್ದು ಹೂಗಾರ, ಶಶಿಧರ ಸ್ವಾಮಿ, ಶಂಕರಗೌಡ ಎಲೆಕೂಡ್ಲಗಿ, ಜಡಿಯಪ್ಪ ಹೂಗಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts