ಬೆಂಗಳೂರು: ತನ್ನ ಕಚೇರಿಯಲ್ಲಿ ಚಿನ್ನ ಕದ್ದಿದ್ದ ಮಣಪ್ಪುರಂ ಫೈನಾನ್ಸ್ ಮ್ಯಾನೇಜರ್ವೊಬ್ಬರನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಿದ್ದೇಶ್ ಬಂಧಿತ. ಮಣಪ್ಪುರಂ ಫೈನಾನ್ಸ್ನ ನಂದಿನಿ ಲೇಔಟ್ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಿದ್ದೇಶ್ಗೆ ಬೆಟ್ಟಿಂಗ್ ಚಟ ಬೆಳೆಸಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಲವೆಡೆ ಸಾಲ ಮಾಡಿಕೊಂಡಿದ್ದರು. ಕೊನೆಗೆ ಸಾಲ ತೀರಿಸಲು ಗ್ರಾಹಕರೊಬ್ಬರ 40 ಗ್ರಾಂ ಚಿನ್ನದ ಸರವನ್ನೇ ಕದ್ದಿದ್ದಾರೆ.
ಆಡಿಟಿಂಗ್ ವೇಳೆ ಚಿನ್ನದ ಸರ ಮಿಸ್ಸಾಗಿರೋದು ಬೆಳಕಿಗೆ ಬಂದಿದೆ. ಅತ್ತ ಮ್ಯಾನೇಜರ್ ಸಿದ್ದೇಶ್ ಕೂಡ ಕೆಲಸಕ್ಕೆ ಬಂದಿರಲಿಲ್ಲ. ಅನುಮಾನಗೊಂಡ ಮಾಲೀಕರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪೊಲೀಸರು ಆರೋಪಿಯನ್ನ ಬಂಧಿಸಿ 1.45 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಸರವನ್ನ ವಶಕ್ಕೆ ಪಡೆದಿದ್ದಾರೆ.
ನನ್ನಿಂದ ಸಹಿಸೋಕೆ ಆಗ್ತಿಲ್ಲ… ಎನ್ನುತ್ತಲೇ ಪೊಲೀಸರ ಹೆಸರು ಪ್ರಸ್ತಾಪಿಸಿ ಸಾವಿನ ಹಾದಿ ಹಿಡಿದ ಮೈಸೂರಿನ ಫೋಟೋಗ್ರಾಫರ್!
ಸಾಯಿಸಲೆಂದೇ ಎಳೆದೊಯ್ದೆ… ಪೊಲೀಸರ ಮುಂದೆ ಸಾಹಿಲ್ ಬಾಯ್ಬಿಟ್ಟ ಸತ್ಯ ಘಟನೆಯಷ್ಟೇ ಕ್ರೂರವಾಗಿದೆ