More

    ಗೋಬ್ಯಾಕ್ ಶೋಭಾ ಸ್ಪಾನ್ಸರ್ ಕಾರ್ಯಕ್ರಮ

    ಚಿಕ್ಕಮಗಳೂರು: ಗೋ ಬ್ಯಾಕ್ ಶೋಭಾ ಎಂಬ ಅಭಿಯಾನ ಸ್ಪಾನ್ಸರ್ ಕಾರ್ಯಕ್ರಮವಾಗಿದೆ. ಒಬ್ಬರನ್ನು ತೇಜೋವಧೆ, ಅವಮಾನ ಮಾಡಿ ಇನ್ನೊಬ್ಬರು ಟಿಕೆಟ್ ಕೇಳಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ. ಗೋಬ್ಯಾಕ್ ಪತ್ರ ಬರೆದಿರುವವರು ನಿಜವಾದ ಬಿಜೆಪಿ ಕಾರ್ಯಕರ್ತರಾ ಎಂದು ಪ್ರಶ್ನಿಸಿದರು.
    ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೀಗೆ ಮಾಡುವುದಿಲ್ಲ. ನನ್ನ ವಿರುದ್ಧದ ಅಭಿಯಾನದ ಹಿಂದೆ ವಿರೋಧ ಪಕ್ಷದ ಕೈವಾಡವೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
    ಪ್ರಜಾಪ್ರಭುತ್ವದಲ್ಲಿ ಟಿಕೆಟ್ ಕೇಳಲು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶವಿದೆ. ಆದರೆ ಇನ್ನೊಬ್ಬರ ತೇಜೋವಧೆ ಮಾಡಿ ಅಪಮಾನಿಸಿ ಅನಾವಶ್ಯಕ ಅಪಪ್ರಚಾರ ಮಾಡಿ ಟಿಕೆಟ್ ಕೇಳಬಾರದು. ಇದನ್ನೆಲ್ಲ ಜನತೆ ಮತ್ತು ಹೈಕಮಾಂಡ್ ಗಮನಿಸುತ್ತದೆ. ಇದಕ್ಕೆಲ್ಲ ಉತ್ತರ ಯಾರು ಕೊಡಬೇಕೋ ಅವರೇ ಕೊಡುತ್ತಾರೆ ಎಂದು ಹೇಳಿದರು.
    ಗೋ ಬ್ಯಾಕ್ ಚಳವಳಿ ಕಳೆದ ಬಾರಿಯೂ ನಡೆದಿತ್ತು. ರಾಜಕಾರಣದಲ್ಲಿ ಇದೆಲ್ಲ ಇರುವಂಥz್ದೆÃ. ರಾಜಕೀಯಕ್ಕೆ ಬಂದ ಮೇಲೆ ಎಲ್ಲವನ್ನೂ ಎದುರಿಸಲೇಬೇಕು. ಗೋಡೆಗೆ ಬಾಲ್ ಹೊಡೆದಷ್ಟೂ ನಮ್ಮ ಕೈ ಗಟ್ಟಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts