More

    ಸುರಕ್ಷತೆ, ಸಂಚಾರ ನಿಯಮ ಪಾಲನೆ ಜಾಗೃತಿ; ಧಾರವಾಡದಿಂದ ಶ್ರೀನಗರಕ್ಕೆ ಸೋಲೋ ಬೈಕ್ ರೈಡ್

    ಧಾರವಾಡ: ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿನಿಯೊಬ್ಬಳು ಧಾರವಾಡದಿಂದ ಕಾಶ್ಮೀರದವರೆಗೆ ಸೋಲೋ ಬೈಕ್ ರೈಡ್ ಹೊರಟಿದ್ದಾಳೆ.
    ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಹಿಂಭಾಗದ ನಿವಾಸಿ ಪ್ರತೀಕ್ಷಾ ಹರವಿಶೆಟ್ಟರ್ ಬೈಕ್ ಪ್ರಯಾಣ ಕೈಗೊಂಡಿದ್ದಾರೆ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಬಿಸಿಎ ಮೊದಲ ಸೆಮಿಸ್ಟರ್ ಓದುತ್ತಿರುವ ಪ್ರತೀಕ್ಷಾಗೆ ಬೈಕ್ ಸವಾರಿಯ ಹುಚ್ಚು. ಸಾರ್ವಜನಿಕರಲ್ಲಿ ಸಂಚಾರ ನಿಯಮ ಪಾಲನೆ ಮತ್ತು ವಾಹನ ಸವಾರರು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸುವ ಉದ್ದೇಶದಿಂದ ೧೦ ದಿನಗಳ ಕಾಶ್ಮೀರ ಪ್ರಯಾಣ ಕೈಗೊಂಡಿದ್ದಾರೆ.
    ಆರ್.ಎನ್. ಶೆಟ್ಟಿ ಕ್ರೀಡಾಂಗಣದಿAದ ಹೊರಟು ಮುಂಬೈ, ಉದಯಪುರ, ಪಠಾಣಕೋಟ್ ಮಾರ್ಗವಾಗಿ ಶ್ರೀನಗರ ತಲುಪಲಿದ್ದಾರೆ. ಅಲ್ಲಿಂದ ಲುಽಯಾನ, ಆಗ್ರಾ, ಇಂದೋರ್ ಮಾರ್ಗವಾಗಿ ಧಾರವಾಡಕ್ಕೆ ವಾಪಸ್ಸಾಗಲಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts