More

    ರವಿಚಂದ್ರನ್ ಜತೆಗೆ ಗಿರಿರಾಜ್ ಸಿನಿಮಾ

    ಬೆಂಗಳೂರು: ‘ಒಂದು ಕ್ರೇಜಿ ನ್ಯೂಸ್ ಸದ್ಯದಲ್ಲೇ ಬರಲಿದೆ …’ ಹಾಗಂತ ಇತ್ತೀಚೆಗೆ ಟ್ವೀಟ್ ಮಾಡಿದ್ದರು ‘ಜಟ್ಟ’ ಖ್ಯಾತಿಯ ಗಿರಿರಾಜ್. ರವಿಚಂದ್ರನ್ ಜತೆಗೆ ಅವರು ಮತ್ತು ನಿರ್ವಪಕ ರಾಜಕುಮಾರ್ ನಿಂತಿರುವ ಒಂದು ಫೋಟೋ ಸಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಷ್ಟಕ್ಕೂ ಏನದು ಕ್ರೇಜಿ ನ್ಯೂಸ್? ರವಿಚಂದ್ರನ್ ಅಭಿನಯದಲ್ಲಿ ಗಿರಿರಾಜ್ ಚಿತ್ರ ಚಿತ್ರ ನಿರ್ದೇಶಿಸುತ್ತಿರಬಹುದಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.

    ಈ ಹಿಂದೆ, ರಾಜಕುಮಾರ್ ನಿರ್ವಣದ ‘ಜಟ್ಟ’ ಮತ್ತು ‘ಮೈತ್ರಿ’ ಚಿತ್ರಗಳನ್ನು ಗಿರಿರಾಜ್ ನಿರ್ದೇಶನ ಮಾಡಿದ್ದರು. ಈಗ ಅವರಿಬ್ಬರೂ ಜತೆಯಾಗಿ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಿರುವುದಕ್ಕೆ ಹೋಗಿದ್ದಾರೆ ಎಂದರೆ, ಹೊಸ ಚಿತ್ರದ ವಿಚಾರವಾಗಿರಬಹುದಾ ಎಂಬ ಕುತೂಹಲ ಸಹಜ. ಈ ಪ್ರಶ್ನೆಯನ್ನು ಗಿರಿರಾಜ್ ಮುಂದಿಟ್ಟರೆ, ಹೌದು ಎಂಬ ಉತ್ತರ ಅವರಿಂದ ಬರುತ್ತದೆ.

    ಇದನ್ನೂ ಓದಿ  ಮದುವೆಗಳಲ್ಲಿ 250 ಜನ ಭಾಗವಹಿಸುವುದಕ್ಕೆ ಅವಕಾಶ: ಮ್ಯಾರೇಜ್ ಹಾಲ್‌ಗಳಿಂದ ಸಿಎಂ ಮೇಲೆ ಒತ್ತಡ

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಗಿರಿರಾಜ್, ‘ಸದ್ಯಕ್ಕೆ ಎಲ್ಲವೂ ಮಾತುಕತೆಯ ಹಂತದಲ್ಲಿದೆ. ರವಿಚಂದ್ರನ್ ಅವರಿಗೆ ಒಂದು ಸಬ್ಜಕ್ಟ್ ಹೇಳಿರುವುದಂತೂ ಹೌದು. ಅವರೂ ಇಷ್ಟಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಅಧಿಕೃತವಾಗಬೇಕಷ್ಟೇ’ ಎನ್ನುತ್ತಾರೆ ಅವರು.

    ಇದೊಂದು ಪೀರಿಯಡ್ ಡ್ರಾಮಾ ಆಗಿರಲಿದೆ ಎನ್ನುವ ಗಿರಿರಾಜ್, ‘1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದ ಕಥೆ ಇದು. ಫರ್ಡಿನೆಂಡ್ ಕಿಟೆಲ್ ಅವರು ಕರ್ನಾಟಕಕ್ಕೆ ಬಂದರಲ್ಲ, ಆಗಿನ ಕಥನ ಇದು. ರವಿಚಂದ್ರನ್ ಅವರಿಗೆ ಈ ಚಿತ್ರದಲ್ಲೊಂದು ವಿಭಿನ್ನವಾದ ಪಾತ್ರವಿದೆ’ ಎನ್ನುತ್ತಾರೆ. ಹಾಗಾದರೆ, ರವಿಚಂದ್ರನ್ ಏನಾದರೂ ಕಿಟಲ್ ಪಾತ್ರವನ್ನು ಮಾಡುತ್ತಿರಬಹುದಾ? ಎಂಬ ಪ್ರಶ್ನೆಗೆ, ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ.

    ಇನ್ನು ಈ ಚಿತ್ರಕ್ಕೆ ಸಾಕಷ್ಟು ರೀಸರ್ಚ್ ನಡೆಯುತ್ತಿದೆಯಂತೆ. ‘ಸಾಮಾನ್ಯವಾಗಿ ನನ್ನ ಚಿತ್ರಗಳ ಸ್ಕ್ರಿಪ್ಟ್ ಕೆಲಸಗಳು ಬೇಗ ಮುಗಿಯುತ್ತವೆ. ಆದರೆ, ಇದಕ್ಕೆ ಸಾಕಷ್ಟು ರೀಸರ್ಚ್ ನಡೆಯುತ್ತಿದೆ. ಹೊಸದೇನನ್ನೋ ಮಾಡಬೇಕು ಎಂಬ ಆಸೆ. ಎಲ್ಲಾ ಅಂದುಕೊಂಡಂತೆ ಆದರೆ, ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ ಗಿರಿರಾಜ್.

    ಭಾರತದ ಘನತೆಗೆ ಧಕ್ಕೆ ತರುವುದಿಲ್ಲ ಎಂದ ಚೀನಾ ವಿದೇಶಾಂಗ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts