More

    ವೋಟಿಗಾಗಿ ಗಿಫ್ಟ್ ಕೂಪನ್; ತೆಲಂಗಾಣ ಮತದಾರರಿಗೆ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ

    ಬೆಂಗಳೂರು: ಹುಷಾರು! ಕಾಂಗ್ರೆಸ್ ನವರು ರಾತ್ರಿ ಹೊತ್ತು ಬಂದು ಕ್ಯೂ ಆರ್ ಕೋಡ್ ಇರುವ ಗ್‌ಟಿ ಕೂಪನ್ನುಗಳನ್ನು ಹಂಚುತ್ತಾರೆ. 3,000 ಹಾಗೂ 5,000 ರೂ. ಮೌಲ್ಯದ ಕೂಪನ್ನುಗಳನ್ನು ಕೊಟ್ಟು ಯಾಮಾರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೆಲಂಗಾಣ ಸೇರಿ ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳ ಮತದಾರರಿಗೆ ಎಚ್ಚರಿಕೆ ನೀಡಿದರು.

    ಜೆ.ಪಿ. ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ರಾಮನಗರ, ಮಾಗಡಿ, ಕನಕಪುರ, ಕುಣಿಗಲ್ ಸೇರಿ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಕೂಪನ್ನುಗಳನ್ನು ಹಂಚಿತ್ತು. ಮೊದಲು ವೋಟು ಮಾಡಿ. ಆಮೇಲೆ ಬೆಂಗಳೂರಿಗೆ ಹೋಗಿ ಮಾಲ್ ನಲ್ಲಿ ಕೂಪನ್ ಕೊಟ್ಟು ಅದರ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿತ್ತು ಎಂದು ಆರೋಪಿಸಿದರು.

    ವೋಟು ಹಾಕಿದ ಜನ ಮಾಲ್ ಗೆ ಬಂದು ಕೂಪನ್ ಕೊಟ್ಟರೆ, ಈ ಕೂಪನ್‌ಗೆ ಯಾವ ಮೌಲ್ಯವೂ ಇಲ್ಲ. ಅದರಲ್ಲಿ ದುಡ್ಡಿಲ್ಲ. ವಸ್ತುಗಳು ಬೇಕಿದ್ದರೆ ದುಡ್ಡು ಕೊಟ್ಟು ಖರೀದಿ ಮಾಡಿ. ಇಲ್ಲವಾದರೆ ಸುಮ್ಮನೆ ಹೋಗಿ ಎಂದು ಮಾಲ್ ನವರು ಹೇಳಿದ್ದರು. ತೆಲಂಗಾಣದಲ್ಲಿ ಇಂಥ ಕೂಪನ್ನುಗಳನ್ನು ಕಾಂಗ್ರೆಸ್ ಹಂಚುವ ಸಾಧ್ಯತೆ ಇದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

    ಕಾಂಗ್ರೆಸ್ ಪಕ್ಷಕ್ಕೆ ವಾಮಮಾರ್ಗದಿಂದ ಚುನಾವಣೆ ಗೆಲ್ಲುವುದು ಕರತಲಾಮಲಕ. ಹೀಗಾಗಿ ಭಾರತ್ ರಾಷ್ಟ್ರ ಸಮಿತಿ, ಬಿಜೆಪಿ ಸೇರಿದಂತೆ ಕಾಂಗ್ರೆಸ್ ವಿರೋಧಿ ಪಕ್ಷಗಳು ತೀವ್ರ ನಿಗಾ ವಹಿಸಬೇಕು ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts