ನವದೆಹಲಿ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಲು ಮಾರ್ಚ್ ಕೊನೆಯ ವಾರದಲ್ಲಿ ಜಾರಿಗೆ ಬಂದ ಲಾಕ್ಡೌನ್ಗಿಂತ ಮೊದಲಿನಿಂದಲೂ ಪ್ರಯತ್ನಗಳು ನಡೆದಿದ್ದವು ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಹೈಕಮಾಂಡ್ ಅದಾಗಲೇ ಸಿಎಂ ಹುದ್ದೆ ಕೈತಪ್ಪಿದಾಗಿನಿಂದಲೂ ಅತೃಪ್ತರಾಗಿದ್ದ ಡಿಸಿಎಂ ಸಚಿನ್ ಪೈಲಟ್ ಜತೆ ಮಾತುಕತೆ ನಡೆಸುತ್ತಿತ್ತು ಎನ್ನಲಾಗಿದೆ. ಆ ಪ್ರಯತ್ನ ಈಗ ತುರುಸುಗೊಂಡಿರುವುದಾಗಿ ಎಂದು ಹೇಳಲಾಗುತ್ತಿದೆ.
ಗೆಹ್ಲೋಟ್ ಸರ್ಕಾರ ಉರುಳಿಸಿದರೆ ಸಿಎಂ ಪಟ್ಟ ತಮಗೇ ಕೊಡಬೇಕು ಎಂದು ಸಚಿನ್ ಪೈಲಟ್ ಬಿಜೆಪಿ ಮುಖಂಡರಿಗೆ ಷರತ್ತು ಹಾಕಿದ್ದಾರೆ. ಆದರೆ, ಅಲ್ಲಿ 45 ಶಾಸಕರ ಬೆಂಬಲ ಹೊಂದಿರುವ ವಸುಂಧರಾ ರಾಜೆ ಅವರನ್ನು ಸಿಎಂ ಮಾಡಬೇಕು ಎಂಬುದು ಬಿಜೆಪಿ ಹೈಕಮಾಂಡ್ನ ಇಚ್ಛೆಯಾಗಿದೆ. ಈ ವಿಷಯ ತಿಳಿದಿದ್ದರೂ ಗೆಹ್ಲೋಟ್ ವಿರುದ್ಧ ಪೈಲಟ್ ಅವರ ಬಂಡಾಯ ಮುಂದುವರಿದಿದೆ.
ಇದನ್ನೂ ಓದಿ: ಕ್ವಾರಂಟೈನ್ನಲ್ಲಿ ಮುಖ್ಯಮಂತ್ರಿ ಬಿಎಸ್ವೈ ಕೈಹಿಡಿದ ‘ಯಯಾತಿ’
ಸದ್ಯಕ್ಕೆ ಪೈಲಟ್ ಕಾಂಗ್ರೆಸ್ ಹೈಕಮಾಂಡ್ ಮುಂದೆ ಬಲಪ್ರದರ್ಶನ ಮಾಡುವ ಮೂಲಕ ಸಿಎಂ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿಟ್ಟಿದ್ದಾರೆ. ಇದಕ್ಕಾಗಿ ಅವರು ತಮ್ಮ ಬೆಂಬಲಿಗ 23 ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯಕ್ಕೆ ಬಿಜೆಪಿ ಹೈಕಮಾಂಡ್ ಜತೆ ಅವರ ಭೇಟಿ ನಿಗದಿಯಾಗಿಲ್ಲ ಎನ್ನಲಾಗುತ್ತಿದೆ.
ಪ್ರಾದೇಶಿಕ ಪಕ್ಷ: ಕಾಂಗ್ರೆಸ್ ಹೈಕಮಾಂಡ್ ತಮ್ಮ ಬೆಂಬಲಕ್ಕೆ ನಿಲ್ಲದೇ ಹೋದರೆ ಪಕ್ಷದಿಂದ ಹೊರಬಂದು ಪ್ರಾದೇಶಿಕ ಪಕ್ಷ ರಚಿಸಿಕೊಳ್ಳುವ ಬಗ್ಗೆಯೂ ಪೈಲಟ್ ಚಿಂತನೆ ನಡೆಸಿದ್ದಾರೆ. ಇದಕ್ಕೆ ಅವಕಾಶವಾದರೆ ಬಿಜೆಪಿಯೊಂದಿಗೆ ಸಖ್ಯ ಬೆಳಸದಿರಲೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್ಪೋರ್ಟ್ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?