More

    ಕಾಂಗ್ರೆಸ್​​ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ: ಜಿಟಿಡಿ

    ಮೈಸೂರು: ಕಾಂಗ್ರೆಸ್​​ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಜೆಡಿಎಸ್​​ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

    ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಟಿ ದೇವೇಗೌಡ ಅವರು ವಿಜಯಶಾಲಿಯಾಗಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಎಸ್​. ಸಿದ್ದೇಗೌಡ ಅವರು ಪ್ರಬಲ ಪೈಪೋಟಿ ನೀಡಿದ್ದರು.

    ಈ ಕುರಿತಾಗಿ ಮಾತನಾಡಿದ ಅವರು, ಕಾಂಗ್ರೆಸ್​​ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರಜನ್ಮ ಕೊಟ್ಟಿದ್ದಾರೆ. ಈ ಕ್ಷೇತ್ರದ ಜನರು ಜೆಡಿಎಸ್​​ ಪಕ್ಷವನ್ನು ಕೈ ಬಿಟ್ಟಿಲ್ಲ. ಎಲ್ಲಾ ಮತದಾರರು, ಮುಖಂಡರು ಹಾಗೂ ಪಕ್ಷದ ನಾಯಕರು ಕಾರ್ಯಕರ್ತರಿಗೆ ಕೃತಜ್ಱತೆ ಸಲ್ಲುತ್ತೇನೆ ಎಂದಿದ್ದಾರೆ.

    ಕಾಂಗ್ರೆಸ್​​ ಪಕ್ಷವನ್ನು ಕಟ್ಟಿದ್ದು ಕರ್ನಾಟಕ. ಇದೀಗ ಕಾಂಗ್ರೆಸ್​​ಗೆ ಶಕ್ತಿ ತುಂಬಿರುವುದು ಕರ್ನಾಟವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್​​ ನಶಿಸಿ ಹೋಗುತ್ತಿದೆ ಎನ್ನುವ ಸಂಧರ್ಭದಲ್ಲಿ ಮತ್ತೊಮ್ಮೆ ಕಾಂಗ್ರೆಸ್​​ ಪಕ್ಷಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಜೆಡಿಎಸ್‌ ಅಭ್ಯರ್ಥಿ ಜಟಿ ದೇವೇಗೌಡ ಅವರು 24,994 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎಸ್​​. ಸಿದ್ದೇಗೌಡ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಇಲ್ಲಿ ಬಿಜೆಪಿಯಿಂದ ಕವೀಶ್‌ ಗೌಡ ಅವರು ಸ್ಪರ್ಧೆ ಮಾಡಿದ್ದರು. ಆಮ್​ ಆದ್ಮಿ ಪಾರ್ಟಿಯಿಂದ ಜಯಶ್ರೀ ಕಿರಣ್​ ನಾಗೇಶ್​ ಕಲ್ಯಾಣಿ ಕಣಕ್ಕೆ ಇಳಿದಿದ್ದರು.

    Karnataka Election Result 2023; ಬಿಜೆಪಿ ಸೋಲಿಗೆ ಕಾರಣಗಳೇನು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts