ಬೆಂಗಳೂರು: ರಾಜಕೀಯ ಹೊರತಾಗಿ ನಾನು ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒಳ್ಳೆ ಸ್ನೇಹಿತರು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳ್ಳಿಯಲ್ಲಿ ನಡೆಯುವ ಕೃಷಿ ಮೇಳಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲು ಅವರ ನಿವಾಸಕ್ಕೆ ಬಂದಿದ್ದೇನೆ. ಇದರಲ್ಲಿ ರಾಜಕೀಯ ಇಲ್ಲ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿ ಹಿರಿಯರು. ನಾನು ಇನ್ನು ಕಿರಿಯವ. ಹೀಗಾಗಿ ನನ್ನನ್ನು ಡಿಕೆಶಿ ಅವರಿಗೆ ಹೋಲಿಕೆ ಮಾಡಬೇಡಿ. ವಿಧಾನ ಪರಿಷತ್ಗೆ ಸ್ಪರ್ಧಿಸಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ನಾನು ಸೋಲಿಸಲು ಮುಂದಾಗಿಲ್ಲ. ಈ ಬಗ್ಗೆ ಯಾರು ಚರ್ಚೆ ಮಾಡುವುದು ಬೇಡ. ಲಕ್ಷ್ಮಣ್ ಸವದಿ ಅವರನ್ನ ಸೋಲಿಸುವಷ್ಟು ಕೀಳು ಮಟ್ಟದ ರಾಜಕೀಯ ನಾನು ಮಾಡುವುದಿಲ್ಲ. ಪಕ್ಷದ ಅಭ್ಯರ್ಥಿಯನ್ನು ಸೋಲಿಸೋದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಅಂತ ಕೆಲಸ ನಾನು ಮಾಡಲ್ಲ. ಖಾತೆ ಬದಲಾವಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಖಾತೆ ಬದಲಾವಣೆಯಲ್ಲಿ ತಲೆ ಹಾಕಲು ನಾನು ಯಾರು. ನಾನು ಮೊದಲಿಗೆ ಮಂತ್ರಿನೇ ಆಗಿಲ್ಲ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್)