More

    ನಾವು ಧರ್ಮ ಸಂಸ್ಥಾಪನಾ ಯಾಗ ಮಾಡಬೇಕಿದೆ ಎಂದ ಮಾಜಿ ಸಿಎಂ ಸದಾನಂದ ಗೌಡ!

    ತುಮಕೂರು: ನಾವು ಧರ್ಮ ಸಂಸ್ಥಾಪನಾ ಯಾಗವನ್ನು ಮಾಡಬೇಕಿದೆ. ಸುರೇಶ್ ಗೌಡ ಅಶ್ವಮೇಧ ಯಾಗದ ಕುದುರೆ. ನಮ್ಮ ಕುದುರೆಗೆ ಹುಮ್ಮಸ್ಸು ಹೆಚ್ಚಿದೆ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

    ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶದಲ್ಲಿ ಸದಾನಂದ ಗೌಡ ಮಾತನಾಡುತ್ತಾ, ನಾನು ಕಾಂಗ್ರೆಸ್ ಹಾಗೂ ಜೆಡಿಎಸ್​​ನವರಿಗೆ ಸವಾಲ್ ಹಾಕುತ್ತೇನೆ. ನಿಮಗೆ ತಾಕತ್ತಿದ್ರೆ ನಮ್ಮ ಕುದುರೆಯನ್ನು ಮುಟ್ಟಿ. ನಮ್ಮ ಪಕ್ಷದ ಸುರೇಶ್ ಗೌಡ ಅವರು ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ಧಿ ಮಂತ್ರದಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

    ನರೇಂದ್ರ ಮೋದಿ ಅವರು ನಾನು ದೇಶದ ಸೇವಕ ಎಂದು ಹೇಳುತ್ತಾರೆ. ಅದೇ ರೀತಿ ಸುರೇಶ್ ಗೌಡ ಕೂಡ ನಾನು ಈ ಕ್ಷೇತ್ರದ ಸೇವಕ ಎಂದು ಹೇಳುತ್ತಾರೆ. ಕಾಂಗ್ರೆಸ್​ನವರು ಪ್ರಜಾಧ್ವನಿ ಎಂದು ಹೇಳುತ್ತಾರೆ. ಆದರೆ ಅವರಲ್ಲೇ ಬೇರೆ ಬೇರೆ ಧ್ವನಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದೇ ಒಂದು ಧ್ವನಿಯಾದರೆ, ಸಿದ್ದರಾಮಯ್ಯ ಅವರದ್ದು ಮತ್ತೊಂದು ಧ್ವನಿ. ಮಲ್ಲಿಕಾರ್ಜುನ ಖರ್ಗೆಯವರದ್ದು ಇನ್ನೊಂದು ಧ್ವನಿ ಎಂದರು.

    ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ ಅಂದ್ರೆ ನಾವು ಮಾಡ್ತೀವಿ; ಮಾಜಿ ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts