More

    ತನಿಖೆಗೂ ಮೊದಲು ವಿಮಾನ ಹಾರಿಸಿ

    ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭಿಸಲು ತಪಸ್ಸಿನಂತೆ ಕೆಲಸ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರ ಏರ್‌ಪೋರ್ಟ್ ಕಾಮಗಾರಿ ತನಿಖೆ ಬಗ್ಗೆ ಮಾತನಾಡುತ್ತಿದೆ. ಮೊದಲು ಸರ್ಕಾರ ವಿಮಾನಯಾನ ಆರಂಭಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್‌ಸಿ ಮಂಜುನಾಥ ಭಂಡಾರಿ ಏರ್‌ಪೋರ್ಟ್ ಕಾಮಗಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬAಧಪಟ್ಟ ಸಚಿವರು ಉತ್ತರವನ್ನೂ ನೀಡಿದ್ದಾರೆ. ಆ.11ರಿಂದ ವಿಮಾನ ಸಂಚಾರ ಆರಂಭಕ್ಕೂ ಮೊದಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲೂ ಸಹಕಾರ ನೀಡಲಿ ಎಂದು ಆಗ್ರಹಿಸಿದರು.
    ಗ್ಯಾರಂಟಿ ಘೋಷಣೆ ಮಾಡುವಾಗ ಕಾಂಗ್ರೆಸ್‌ನವರಿಗೆ ಮುಂದಾಲೋಚನೆ ಇರಬೇಕಿತ್ತು. ಈಗ ಅದರ ಬಗ್ಗೆ ಯೋಚಿಸಿದರೆ ಪ್ರಯೋಜನವಿಲ್ಲ. ಅವರ ಗ್ಯಾರಂಟಿಗಳೆಲ್ಲ ಹುಸಿಯಾಗುತ್ತಿವೆ. ಜನರಿಗೆ ರಾಜ್ಯ ಸರ್ಕಾರದ ಬಗ್ಗೆ ನಂಬಿಕೆಯೂ ಕಡಿಮೆಯಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.
    ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ರಾಜ್ಯ ಸರ್ಕಾರ ಮತ್ತು ಪೊಲೀಸರ ಬಗ್ಗೆ ನನಗೆ ನಂಬಿಕೆ ಇದೆ. ಆದರೆ ಮುನಿಗಳ ಹತ್ಯೆ ಹಿಂದೆ ಹಲವರ ಕೈವಾಡಗಳಿವೆ. ರಾಷ್ಟçದ್ರೋಹಿಗಳು ಈ ಕೃತ್ಯ ಎಸಗಿರುವ ಅನುಮಾನಗಳಿವೆ. ಕಾಂಗ್ರೆಸ್ ಅಽಕಾರಕ್ಕೆ ಬಂದ ಅಲ್ಪಾವಽಯಲ್ಲೇ ಗೂಂಡಾಗಿರಿ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇನ್ನೊಂದೆಡೆ ರಾಹುಲ್ ಗಾಂಽ ಅನರ್ಹತೆ ಆದೇಶದ ವಿರುದ್ಧ ಪ್ರತಿಭಟಿಸುತ್ತಿರುವ ಕಾಂಗ್ರೆಸಿಗರು ತಮಗೆ ನ್ಯಾಯಾಲಯದ ಬಗ್ಗೆಯೂ ಗೌರವ ಇಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts