ಬೆಂಗಳೂರು: ಹುಟ್ಟುಹಬ್ಬದ ವೇಳೆ ತಲ್ವಾರ್ನಲ್ಲಿ ಕೇಕ್ ಕತ್ತರಿಸಿದ ನಟ ದುನಿಯಾ ವಿಜಯ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಪಡಿಸಿದ ಆರೋಪದಡಿ ಗಿರಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹುಟ್ಟು ಹಬ್ಬದ ದಿನ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿ ಗಸ್ತು ಪೇದೆ ಮಧುಸೂದನ್ ದೂರು ನೀಡಿದ್ದಾರೆ. ಜ.20ರ ರಾತ್ರಿ 12 ಗಂಟೆಯಲ್ಲಿ ಗಸ್ತು ಮಾಡುತ್ತಿದ್ದಾಗ ಬನಶಂಕರಿ 3ನೇ ಹಂತ 7ನೇ ಬ್ಲಾಕ್ನಲ್ಲಿ ದುನಿಯಾ ವಿಜಯ್, ಮನೆ ಮುಂದೆ ರಸ್ತೆಯಲ್ಲಿ ಪೆಂಡಾಲ್ ಹಾಕಿ ಜನ ಸೇರಿಸಿದ್ದಾರೆ ಎಂಬ ಮಾಹಿತಿ ಬಂತು. ವಿಜಯ್ ತಮ್ಮ ಅಭಿಮಾನಿಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ತಲ್ವಾರ್ ಕೇಕ್ ಕಟ್ ಮಾಡುತ್ತಿದ್ದರು.
ಅವಧಿಗೆ ಮೀರಿ ಲೌಡ್ಸ್ಪೀಕರ್ ಉಪಯೋಗಿಸುತ್ತಿದ್ದರಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪೆಂಡಾಲ್ ಹಾಕಿ ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ಅಡ್ಡಿವುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಗಸ್ತು ಸಿಬ್ಬಂದಿ ಉಲ್ಲೇಖಿಸಿದ್ದಾರೆ.