ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕನ್ನಡ ಚಿತ್ರರಂಗದ ನಿಯೋಗವು ಕಳೆದ ತಿಂಗಳೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಬೇಕಿತ್ತು. ಈ ಕುರಿತು ಭೇಟಿ ಸಹ ನಿಗದಿಯಾಗಿತ್ತು. ಅಷ್ಟರಲ್ಲಿ, ಮುಖ್ಯಮಂತ್ರಿಗಳಿಗೆ ಕರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ, ಈ ಭೇಟಿ ಸಾಧ್ಯ ಆಗಿರಲಿಲ್ಲ.
ಇದನ್ನೂ ಓದಿ: ನಾಳೆ ಸರ್ಪ್ರೈಸ್ನೊಂದಿಗೆ ಭೇಟಿಯಾಗ್ತಾರಂತೆ ರಿಷಭ್ …
ಬುಧವಾರ ಬೆಳಿಗ್ಗೆ ಈ ಭೇಟಿ ಕೊನೆಗೂ ಸಾಧ್ಯವಾಗಿದೆ. ಶಿವರಾಜಕುಮಾರ್ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕಿರುತೆರೆ ಮತ್ತು ಚಿತ್ರರಂಗವನ್ನು ಅವಲಂಬಿಸಿರುವ ಚಿತ್ರನಗರಿ ನಿರ್ಮಾಣ, ಕಾರ್ಮಿಕರಿಗೆ ಪ್ಯಾಕೇಜ್, ಚಿತ್ರಮಂದಿರ ಪ್ರಾರಂಭ, ದರ ನಿಗದಿ, ತೆರಿಗೆ ವಿನಾಯಿತಿ ಮತ್ತು ಚಿತ್ರರಂಗದ ಪುನಶ್ಚೇತನದ ಕುರಿತಾಗಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮಹತ್ವಾಕಾಂಕ್ಷೆಯ ಚಿತ್ರನಗರಿಯನ್ನು ಬೆಂಗಳೂರಿನಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ಆದಷ್ಟು ಬೇಗ ಜಾಗ ಗುರುತಿಸಲಾಗವುದು ಎಂದು ಹೇಳಿದ್ದಾರೆ. ಜತೆಗೆ, ಚಿತ್ರನಗರಿಗಾಗಿ ಬಜೆಟ್ ನಲ್ಲಿ 500 ಕೋಟಿ ರೂ ಕಾದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಯಾವುದೇ ಅತಿಕ್ರಮಣ ನಿರ್ಮಾಣ ಮಾಡಿಲ್ಲ ಎಂದ ಕಂಗನಾ
ಈ ಸಂದರ್ಭದಲ್ಲಿ ಶಿವರಾಜಕುಮಾರ್ ಅವರ ಜತೆಗೆ ಯಶ್, ತಾರಾ, ‘ದುನಿಯಾ’ ವಿಜಯ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ,ರಾ. ಗೋವಿಂದು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ನಿಮ್ಮ ದೇಹ ನಿಮ್ಮದಲ್ಲ, ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ… ಹೀಗಂತ ನಟ ಯಶ್ ಹೇಳಿದ್ದೇಕೆ?