ಬೆಂಗಳೂರು: ಆಯುಧ ಪೂಜೆಯ ದಿನದಂದು ಗಂಡ-ಹೆಂಡತಿ ನಡುವೆ ನಡೆದ ಜಗಳ ಕೊನೆಗೆ ಪತಿಯ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.
ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಚ್.ಎಸ್.ರವಿ ಎಂಬುವವರು ಕೊಲೆಯಾದವರು.
36 ವರ್ಷದ ರವಿ ಹಾಗೂ ಅವರ ಪತ್ನಿ ರಾಧಿಕಾ ನಡುವೆ ಭಾನುವಾರ ಜಗಳ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇಬ್ಬರ ಜಗಳವನ್ನು ಬಿಡಿಸಲು ರವಿ ತಮ್ಮಂದಿರಾದ ಆದಿಶಂಕರ್ ಹಾಗೂ ಕಾರ್ತಿಕ್ ಮುಂದಾಗಿದ್ದರು. ಆಗ ರವಿ ಅಡುಗೆ ಮನೆಯ ಚಾಕುವನ್ನು ಕೈಗೆತ್ತಿಕೊಂಡು ತಮ್ಮಂದಿರ ವಿರುದ್ಧ ತಿರುಗಿ ಬಿದ್ದಿದ್ದರು.
ಈ ಸಂದರ್ಭದಲ್ಲಿ ಆ ಚಾಕುವನ್ನು ಕಸಿದುಕೊಂಡ ಆದಿಶಂಕರ್ ಅಣ್ಣ ರವಿಗೆ ಇರಿದಿದ್ದಾನೆ. ಚಾಕು ರವಿಯ ಎದೆ ಭಾಗಕ್ಕೆ ತಾಕಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಪ್ರಕರಣ ಸಂಬಂಧ ಪೊಲೀಸರು ಆದಿಶಂಕರ್ನನ್ನು ಬಂಧಿಸಿದ್ದಾರೆ.