More

    ಇಷ್ಟೊತ್ತಾದ್ರೂ ತಂದೆ ಮನೆಗೆ ಬರಲಿಲ್ಲವೆಂದು ನೋಡಲು ಹೋದ ಮಗನನ್ನೂ ಬಿಡದ ಸಾವು!

    ರಾಯಚೂರು: ವಿದ್ಯುತ್ ತಂತಿ ತಗುಲಿ ತಂದೆ ಮತ್ತು ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ನಡೆದಿದೆ.

    ಮಹೇಶ ಆನಂದಪ್ಪ (46), ವಿನೋದ್ ಮಹೇಶ್(16) ಮೃತಪಟ್ಟವರಾಗಿದ್ದಾರೆ. ನಿನ್ನೆ ಸಂಜೆ ವೇಳೆ ಮನೆಗೆ ವಿದ್ಯುತ್ ಸಮಸ್ಯೆ ಉಂಟಾಗಿದೆ. ಆಗ ಮಹೇಶ್ ಏನಾಗಿದೆ ನೋಡಲು ತೆರಳಿದ್ದಾರೆ. ಮನೆಗೆ ಸಂಪರ್ಕಿಸಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ವಿದ್ಯತ್ ಪ್ರವಹಿಸಿ ಮೃತಪಟ್ಟಿದ್ದಾರೆ. ನಂತರ ತಂದೆಗೆ ಏನಾಯಿತೆಂದು ನೋಡಲು ಹೋಗಿದ್ದ ಮಗನಿಗೂ ವಿದ್ಯುತ್ ತಗುಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿ ತಂಗಿ ಕೊಂದ ಅಣ್ಣ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಕುರಿತು ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. (ದಿಗ್ವಿಜಯ ನ್ಯೂಸ್​)

    ಸ್ನೇಹಿತೆಯ ಪತಿಯೆಂಬ ನಂಬಿಕೆಯಿಂದ ಮನೆಗೆ ಸೇರಿಸಿದ್ರೆ ಆತ ಮಾಡಿದ್ದನ್ನು ನೋಡಿ ಬೆಚ್ಚಿಬಿದ್ದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts