ಚಿಕ್ಕಮಗಳೂರು: ಮಳೆಯನ್ನೂ ಲೆಕ್ಕಿಸದೆ ಚಾರ್ಮಾಡಿ ಘಾಟ್ ಕಣ್ತುಂಬಿಕೊಳ್ಳಲು ಬಂದ ಯುವಕರ ತಂಡವೊಂದು ರಸ್ತೆಯ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಅಲ್ಲೇ ಕುಣಿದುಕುಪ್ಪಳಿಸುತ್ತಾ ಇತರ ವಾಹನ ಸವಾರರಿಗೆ ಕಿರಿಕಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.
ಚಾರ್ಮಾಡಿ ಘಾಟ್ನ ರಸ್ತೆಯಲ್ಲೇ ಪ್ರವಾಸಿಗರು ಗುಂಪೊಂದು ಡ್ಯಾನ್ಸ್ ಮಾಡುತ್ತಿದ್ದರಿಂದ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು. ಜಲಪಾತಗಳ ಸಮೀಪ ಘಾಟ್ ರಸ್ತೆಯಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳುತ್ತಾ ಇತರರಿಗೆ ಕಿರಿಕಿರಿ ಕೊಡುವುದಕ್ಕೆ ಬ್ರೇಕ್ ಹಾಕಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಮಗ ಕೇಂದ್ರ ಸಚಿವ, ಅಪ್ಪ-ಅಮ್ಮ ಕೃಷಿ ಕೂಲಿ ಕಾರ್ಮಿಕರು… ಸಿರಿವಂತಿಕೆ ಬೇಡವೇ ಬೇಡ ಎಂದರಿವರು!