More

    ಕ್ಷೀಣಿಸಿದ ಮಳೆ, ಸೇತುವೆ ಸಂಚಾರಕ್ಕೆ ಮುಕ್ತ

    ಚಿಕ್ಕೋಡಿ: ತಾಲೂಕಿನಲ್ಲಿ ಬುಧವಾರ ಕೃಷ್ಣಾ ಹಾಗೂ ಉಪನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ 9 ಸೇತುವೆಗಳ ಪೈಕಿ 7 ಸಂಚಾರಕ್ಕೆ ಮುಕ್ತವಾಗಿವೆ. ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 84,500 ಕ್ಯೂಸೆಕ್ ಮತ್ತು ಸುಳಕೂಡ ಮತ್ತು ಚಿಕಲಿ ಬ್ಯಾರೇಜ್‌ನಿಂದ ದೂಧಗಂಗಾ ಮತ್ತು ವೇದಗಂಗಾ ನದಿಗೆ 13,200 ಕ್ಯೂಸೆಕ್ ಸೇರಿ ಒಟ್ಟು 97,700 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಭೋಜ-ಹುನ್ನರಗಿ, ಸಿದ್ನಾಳ- ಅಕ್ಕೋಳ, ಭೋಜವಾಡಿ- ಕುನ್ನೂರ ಮತ್ತು ಜತ್ರಾಟ-ಭಿವಸಿ ಹಾಗೂ ಕಾರದಗಾ- ಭೋಜ ಬ್ಯಾರೇಜ್ ರಸ್ತೆ ಹಾಗೂ ಯಕ್ಸಂಬಾ-ದಾನವಾಡ ಮತ್ತು ಸದಲಗಾ-ಬೋರಗಾಂವ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿವೆ. ಮಲಿಕವಾಡ- ದತ್ತವಾಡ, ಹಾಗೂ ಕಲ್ಲೋಳ- ಯಡೂರ ಬ್ಯಾರೇಜ್ ಜಲಾವೃತ ಸ್ಥಿತಿಯಲ್ಲೇ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts