ಏಳೂರು: ಫೇಸ್ಬುಕ್ನಲ್ಲಿ ಹುಟ್ಟಿದ ಪ್ರೀತಿಯೊಂದು ರೋಚಕ ಟ್ವಿಸ್ಟ್ ಪಡೆದುಕೊಂಡರೂ ಹಿರಿಯರ ಒಪ್ಪಿಗೆಯಿಂದ ಮದುವೆಯಾಗಿ ಇದೀಗ ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ಫೇಸ್ಬುಕ್ ಪ್ರೇಮ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ವಿವರಣೆಗೆ ಬರುವುದಾದರೆ, ಆಂಧ್ರ ಪ್ರದೇಶದ ಏಳೂರು ಮೂಲದ ತಾರಕ ಅಲಿಯಾಸ್ ಪಾಂಡುಗೆ ಫೇಸ್ಬುಕ್ನಲ್ಲಿ ಭೂಮಿ ಹೆಸರಿನ ಯುವತಿಯ ಪರಿಚಯವಾಗುತ್ತದೆ. ಇಬ್ಬರ ನಡುವಿನ ಪರಿಚಯ ತದನಂತರದಲ್ಲಿ ಪ್ರೀತಿಗೆ ತಿರುಗುತ್ತದೆ. ಆದರೆ, ಇಬ್ಬರ ಪ್ರೀತಿ ಒಂದು ತಿರುವು ಪಡೆದುಕೊಳ್ಳುತ್ತದೆ. ಏನೆಂದರೆ, ಭೂಮಿ ಹೆಸರಿನ ಯುವತಿ ಯುವತಿಯೇ ಅಲ್ಲ. ಬದಲಾಗಿ ಆಕೆ ತೃತೀಯ ಲಿಂಗಿ ಎಂಬುದು ಪಾಂಡುಗೆ ತಿಳಿಯುತ್ತದೆ.
ಇದನ್ನೂ ಓದಿರಿ: ಗಂಡನ ಮರ್ಮಾಂಗವನ್ನೇ ಚಾಕುವಿನಿಂದ ಚುಚ್ಚಿದ ಹೆಂಡತಿ! ಇಬ್ಬರಲ್ಲಿ ಅಕ್ರಮ ಸಂಬಂಧ ಇದ್ದಿದ್ದು ಯಾರಿಗೆ?
ಆದರೂ ಪಾಂಡು ತನ್ನ ಪ್ರೀತಿಯನ್ನು ಮುಂದುವರಿಸುತ್ತಾನೆ. ಮದುವೆಗೂ ಒಪ್ಪಿಗೆ ನೀಡುತ್ತಾನೆ. ಅದರಂತೆ 2020ರ ಜನವರಿಯಲ್ಲಿ ಹಿರಿಯರ ಒಪ್ಪಿಗೆ ಪಡೆದು ಆಕೆಯನ್ನು ಮದುವೆಯೂ ಆಗುತ್ತಾನೆ. ಒಂದು ವರ್ಷ ಚೆನ್ನಾಗಿಯೇ ಸಂಸಾರ ನಡೆಸುತ್ತಾರೆ. ಆದರೆ, ಇಬ್ಬರ ನಡುವೆ ಇದೀಗ ಏನು ನಡೆದಿದೆಯೋ ತಿಳಿದಿಲ್ಲ. ಪಾಂಡು ಆಕೆಯನ್ನು ಬೇಡ ಎನ್ನುತ್ತಿದ್ದಾನೆ.
ಕುಟುಂಬ ಇಬ್ಬರನ್ನು ಒಂದು ಮಾಡಿದರು ಸಹ ಇಬ್ಬರ ನಡುವೆ ಮಾತ್ರ ಹೊಂದಾಣಿಕೆ ಆಗುತ್ತಿಲ್ಲ. ಆದರೆ, ವರದಕ್ಷಿಣೆಗಾಗಿ ಪಾಂಡು, ಆಕೆಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಇದೀಗ ಹೈದರಾಬಾದ್ ಮೂಲದ ಭೂಮಿ ಪಾಂಡು ವಿರುದ್ಧ ಹೈದರಾಬಾದ್ನ ಎಲ್ಬಿ ನಗರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಸೈಬರಾಬಾದ್ ಪೊಲೀಸ್ ಆಯುಕ್ತ ಕನ್ನಡಿಗ ವಿಸಿ ಸಜ್ಜನರ್ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!
ಆತಂಕವಾದ, ಹಿಂಸಾಚಾರ ಹರಡುತ್ತಿರುವವರಲ್ಲಿ ಸುಶಿಕ್ಷಿತರೂ ಇದ್ದಾರೆ : ಮೋದಿ ಕಳವಳ