ವಿಜಯವಾಣಿ ಸುದ್ದಿಜಾಲ ಗದಗ
ಸಾವನ್ನಪ್ಪಿದ ಬಳಿಕ ಮುಚ್ಚಿದ ಕಣ್ಣುಗಳಿಂದ ಇನ್ನೋರ್ವ ವ್ಯಕ್ತಿ ಜಗತ್ತನ್ನು ನೋಡಲು ಕಣ್ಣು ದಾನ ಮಾಡಿ ಎಂದು ಡಾ. ವೀರೇಶ ಹಂಚಿನಾಳ ಹೇಳಿದರು.
ಲೈಯನ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ಏರ್ಪಡಿಸಿದ್ದ ನೇತ್ರದಾನ ಜಾಗೃತಿ, ತಿಳುವಳಿಕೆ ಜಾಥಾ ಕಾರ್ಯಕ್ರಮಕ್ಕೆ ತೋಂಟದಾರ್ಯ ಮಠದ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿ, ಮರಣಾನಂತರ ನೇತ್ರಗಳನ್ನು ದಾನವಾಗಿ ನೀಡಲು ಪ್ರತಿಜ್ಞೆಯನ್ನು ಮಾಡಿ ತಮ್ಮ ಹೆಸರನ್ನು ನೋಂದಾಯಿಸಬೇಕು. ನೇತ್ರದಾನವು ಪವಿತ್ರವಾದ ಮಾನವತಾ ಸೇವೆ. ಈ ಆಂದೋಲನದ ಜಾಗೃತಿಯನ್ನು ಸಾಮಾನ್ಯ ಜನರಲ್ಲಿ ಮೂಡಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
ತೋಂಟದಾರ್ಯ ಮಠದಿಂದ ಆರಂಭಗೊಂಡ ಈ ಜಾಥಾ ಮಹೇಂದ್ರಕರ, ಹುಯಿಲಗೋಳ ನಾರಾಯಣರಾವ್, ಬಸವೇಶ್ವರ, ಕೆ. ಎಚ್. ಪಾಟೀಲ, ಮಾಳಶೆಟ್ಟಿ ಸರ್ಕಲ್, ಕೃಷ್ಣಾ ಟಾಕೀಜ್ ಮಾರ್ಗವಾಗಿ ಮರಳಿ ತೋಂಟದಾರ್ಯ ಮಠದ ಬಳಿ ಬಂದು ಜಾಥಾ ಕೊನೆಗೊಂಡಿತು. ಮಾರ್ಗದಲ್ಲಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ನೇತ್ರದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಕ್ಲಬ್ ಅಧ್ಯ ರಮೇಶ ಶಿಗ್ಲಿ, ಕಾರ್ಯದಶಿರ್ ಪ್ರವಿಣ ವಾರಕರ, ರಾಜು ಮಲ್ಲಾಡದ, ದತ್ತು ಬೇವಿನಕಟ್ಟಿ, ಡಾ. ಜೆ. ಸಿ. ಶಿರೋಳ, ಎಂ. ಬಿ. ಸಿಕ್ಕೇದೇಸಾಯಿ,ಅರವಿಂದ ಪಟೇಲ್, ಅನಂತ ಅಮೀಚಂದ ಇತರರು ಇದ್ದರು.