ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನೀಯರು ಹೆಚ್ಚು ಹೆಚ್ಚು ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಮೂಲದ ಸಿಖ್ ಮತ್ತು ಹಿಂದೂ ಸಮುದಾಯದ ಜನರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಜೈವೀರ್ ಶೇರ್ಗಿಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಎರಡು ಪುಟದ ಪತ್ರ ಬರೆದಿರುವ ಶೇರ್ಗಿಲ್, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಭಾರತೀಯ ಮೂಲದವರನ್ನು ಕೊಲ್ಲುವ ಹಟ ಹೊಂದಿರುವ ತಾಲಿಬಾನ್ಗೆ, ಅಲ್ಲಿ ಸಿಕ್ಕಿಹಾಕಿಕೊಂಡಿರುವ 650 ಸಿಖ್ಖರು ಮತ್ತು 50 ಹಿಂದೂಗಳು ಸುಲಭದ ಟಾರ್ಗೆಟ್ಗಳಾಗಿದ್ದಾರೆ ಎಂದಿದ್ದಾರೆ.
My letter to Minister for External Affairs in personal capacity as citizen of India belonging to Sikh Community requesting Govt of India to evacuate Hindus/Sikhs from Afghan on special visa considering escalating & disturbing violence by Taliban pic.twitter.com/n4A6xOOWsg
— Jaiveer Shergill (@JaiveerShergill) August 9, 2021
ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರರೂ ಆಗಿರುವ ಜೈವೀರ್ ಶೇರ್ಗಿಲ್, ‘ಸಿಖ್ ಸಮುದಾಯಕ್ಕೆ ಸೇರಿದ ಭಾರತೀಯ ನಾಗರೀಕನಾಗಿ ನನ್ನ ವೈಯಕ್ತಿಕವಾಗಿ ಸಾಮರ್ಥ್ಯದಲ್ಲಿ ಈ ಪತ್ರ ಬರೆದಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿರುವ ಹಿಂದೂಗಳು ಅಥವಾ ಸಿಖ್ಖರನ್ನು ವಿಶೇಷ ವೀಸಾ ನೀಡಿ ತೆರವುಗೊಳಿಸಬೇಕು. ಜೊತೆಗೆ ಯುದ್ಧಸಂತ್ರಸ್ತ ಭಾರತೀಯ ಮೂಲದ ಜನರಿಗೆ ಆರ್ಥಿಕ ಭದ್ರತೆ ಒದಗಿಸಬೇಕೆಂದು ಕೋರಿದ್ದಾರೆ. (ಏಜೆನ್ಸೀಸ್)
ಗ್ರಾಮ ಕೊಚ್ಚಿ ಹೋಗಿ ಎರಡು ವರ್ಷವಾದ್ರೂ ಪರಿಹಾರವಿಲ್ಲ! ನಾಡಕಛೇರಿ ಮುಂದೆ ಮೌನ ಪ್ರತಿಭಟನೆ
VIDEO | ನಡುರಸ್ತೆಯಲ್ಲಿ ಡ್ಯಾನ್ಸ್, ಕ್ಯಾಮೆರಾಗೆ ಪೋಸ್!