ಬೆಳ್ತಂಗಡಿ: ಪಂಪ್ ಸ್ವಿಚ್ ಹಾಕಲು ಹೋದ ತಾಯಿ ಮತ್ತು ಮಗು ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಭಾನುವಾರ ಬೆಳಗ್ಗೆ ಧರ್ಮಸ್ಥಳ ಸಮೀಪದ ಪಟ್ರಮೆಯಲ್ಲಿ ನಡೆದಿದೆ.
ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಪಂಪ್ನ ಸ್ವಿಚ್ ಹಾಕಲು ಪಂಪ್ಶೆಡ್ನೊಳಗೆ ಬಂದಿದ್ದ ಹರೀಶ್ ಗೌಡ ಅವರ ಪತ್ನಿ ಗೀತಾ(30) ಮತ್ತು ನಾಲ್ಕು ವರ್ಷದ ಪುತ್ರ ಭವಿಷ್ ಮೃತಪಟ್ಟಿದ್ದಾರೆ.
ದನಗಳಿಗೆ ನೀರು ಕೊಡಲೆಂದು ಮೋಟಾರ್ ಹಾಕಲು ತೆರಳಿದ್ದುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.