More

    ಕಾರು ಡಿಕ್ಕಿ ಹೊಡೆದು ಮುರಿದ ವಿದ್ಯುತ್​ ಕಂಬ; ಚಾಲಕ ಸತ್ತರೂ ನಷ್ಟ ಭರಿಸುವಂತೆ ದೂರು ದಾಖಲು!

    ದಾವಣಗೆರೆ: ಎಲೆಕ್ಟ್ರಿಕ್​ ಕಂಟ್ರ್ಯಾಕ್ಟರ್​ ಒಬ್ಬರ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದು ಮುರಿದು ಹೋಗಿದ್ದು, ತುಂಡಾಗಿರುವ ವಿದ್ಯುತ್ ಕಂಬದ ನಷ್ಟ ಭರಿಸುವಂತೆ ಅಪಘಾತದಲ್ಲಿ ಮೃತಪಟ್ಟಿರುವ ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

    ದಾವಣಗೆರೆ ಜಿಲ್ಲೆಯ ಜಗಳೂರು-ಹಿರೇಮಲ್ಲನಹೊಳೆ ರಸ್ತೆಯ ಸಿದ್ದಮ್ಮನಹಳ್ಳಿ ಕ್ರಾಸ್ ಬಳಿ ಮೂರು ದಿನಗಳ ಹಿಂದೆ ಈ ಅಪಘಾತ ಸಂಭವಿಸಿತ್ತು. ಕಾರು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಜಗಳೂರು‌ ನಿವಾಸಿ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಚಾಂದ್​ ಪೀರ್ (32) ಮೃತಪಟ್ಟಿದ್ದರು.

    ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾದ್ದರಿಂದ ಅದರ ನಷ್ಟ ಭರಿಸಿಕೊಡುವಂತೆ ಬೆಸ್ಕಾಂ ಕಿರಿಯ ಇಂಜಿನಿಯರ್ ರಂಗನಾಥ ಎಂಬವರು ಈ ದೂರನ್ನು ದಾಖಲಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್​ ಕುರಿತ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.

    ಕಡಿಮೆ ಬಾಡಿಗೆಗೆ ತೆರಳುತ್ತಿದ್ದವ ಕೊಲೆಯಾಗಿ ಹೋದ; 12 ಗಂಟೆಯೊಳಗೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ ಪೊಲೀಸರು

    ನಮ್ಮ ಪ್ರಧಾನಿ ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts