More

    ಬುಲೆಟ್ ಓಡಿಸಿ ಜಾಗೃತಿ ಮೂಡಿಸಿದ ಡಿಸಿ

    ಕಲಬುರಗಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಅಂಗವಾಗಿ ಸೋಮವಾರ ಕಲಬುರಗಿ‌ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ವರೆಗೆ ಆಯೋಜಿಸಿದ ಬೈಕ್ ರ್ಯಾಾಲಿ ನಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬುಲೆಟ್ ಓಡಿಸುವ ಮೂಲಕ ಗಮನ ಸೆಳೆದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ‌ ಸಂಘದ ಜಿಲ್ಲಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂಜೆ ಕಲಬುರಗಿ ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.

    ಚಾಲನೆ ನೀಡಿದ ನಂತರ ಯಶವಂತ‌ ವಿ. ಗುರುಕರ್ ಅವರು ಬುಲೆಟ್ ಹತ್ತಿದಲ್ಲದೆ ಹಿಂಬದಿ ಜಿ.ಪಂ. ಸಿ.ಇ.ಓ ಮತ್ತು ಸ್ವೀಪ್‌ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ ಅವರನ್ನು ಕೂರಿಸಿಕೊಂಡು ರೈಡ್ ಗೆ ಇಳಿದರು. ಎಸ್.ಪಿ. ಇಶಾ ಪಂತ್ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಸ್ಕೂಟಿ ಓಡಿಸುವ ಮೂಲಕ ಡಿ.ಸಿ.ಗೆ ಸಾಥ್ ನೀಡಿದರು. ರ್ಯಾಲಿ ಗಂಜ್ ಪ್ರದೇಶದ ನಗರೇಶ್ವರ ಶಾಲೆ ವರೆಗೆ ಸಾಗಿ ಮರಳಿ ಜಗತ್ ವೃತ್ತಕ್ಕೆ ಬಂದು ಸಂಪನ್ನಗೊಂಡಿತ್ತು.

    ನಗರದಲ್ಲಿ ಮತದಾನ‌ ಕಡಿಮೆ, ಓಟ್ ಮಾಡುವಂತೆ ಡಿ.ಸಿ. ಮನವಿ

    ಜಗತ್ ವೃತ್ತದಲ್ಲಿ ನೌಕರರಿಗೆ ಮತದಾನ ಪ್ರತಿಜ್ಞೆ ಬೋಧಿಸಿದ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು, ಕಲಬುರಗಿ ನಗರದಲ್ಲಿ ಮತದಾನ ಪ್ರಮಾಣ ಶೇ.49 ಇದ್ದು, ಇಬ್ಬರಲ್ಲಿ ಒಬ್ಬರು ಮಾತ್ರ ಮತದಾನ ಮಾಡುತ್ತಿದ್ದಾರೆ. ಸದೃಢ ಭಾರತಕ್ಕೆ ಸಂವಿಧಾನಬದ್ದ ಹಕ್ಕಾಗಿರುವ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಮನವಿ ಮಾಡಿದರು.

    ಜಿಲ್ಲಾ ಪಂಚಾಯತ್ ಸಿ‌.ಇ.ಓ ಡಾ.ಗಿರೀಶ್ ಡಿ. ಬದೋಲೆ‌ ಮಾತನಾಡಿದರು.

    ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಡಿ.ಎಚ್.ಓ ಡಾ.ರಾಜಶೇಖರ ಮಾಲಿ, ‌ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ‌ ಮಾನಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಮಠಪತಿ, ಸತೀಷ್ ಸಜ್ಜನ್,‌ಬಾಬು ಮೌರ್ಯ, ನಾಗೇಂದ್ರಪ್ಪ ಅವರಾದಿ,‌ ರವಿ ಮಿರಸ್ಕರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು, ಶಿಕ್ಷಕರು ಭಾಗವಹಿಸಿದ್ದರು. ರ್ಯಾಲಿ ನಲ್ಲಿ ಭಾಗವಹಿಸಿದವರಿಗೆ ಟಿ.ಶರ್ಟ್, ಕ್ಯಾಪ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts