ಕೊಳ್ಳೇಗಾಲ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ನಂಜುಂಡಸ್ವಾಮಿ ಆಯ್ಕೆಯಾಗಿದ್ದಾರೆ.
ಕಳೆದ ಸೆ.30 ರಿಂದ ಅ.1ರವರೆಗೆ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸ್ಟೇಟ್ ಸೆಲೆಕ್ಷನ್ ಚಾಂಪಿಯನ್ಷಿಪ್ನಲ್ಲಿ ರಾಜ್ಯಾಧ್ಯಕ್ಷ ಸೆನ್ಸಾಯಿ ಅರುಣ್ ಮಾಚಯ್ಯ ಹಾಗೂ ಕಾರ್ಯದರ್ಶಿ ಸೆನ್ಸಾಯಿ ಭಾರ್ಗವ ರೆಡ್ಡಿ ಅವರು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಚಾಮರಾಜನಗರ ಜಿಲ್ಲಾಧ್ಯಕ್ಷರನ್ನಾಗಿ ನಂಜುಂಡಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ರೆಫ್ರಿ ಕಮಿಷನ್ ಚೇರ್ಮನ್ ಸೆನ್ಸಾಯಿ ಶಿವದಾಸ್, ಸೆನ್ಸಾಯಿ ಕೆಪಿ ಜೋಸ್, ಸೆನ್ಸಾಯಿ ಓ ಶಂಕರ್, ಸೆನ್ಸಾಯಿ ಕೃಷ್ಣ, ಸೆನ್ಸಾಯಿ ಕೀರ್ತಿ ಇದ್ದರು.