More

    ವಿದ್ಯೆ ಪರಿವರ್ತನೆ ತರುವ ಮಾರ್ಗ

    ಹನಗೋಡು: ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟ ಶಾಲೆ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಮುಖ್ಯಶಿಕ್ಷಕಿ ಸೀಮಾ ಹೇಳಿದರು.

    ಹನಗೋಡು ಹೋಬಳಿಯ ಕಡೆಮನುಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್, ಆಟದ ಸಾಮಗ್ರಿಗಳು ಹಾಗೂ ವೇದಿಕೆಯ ಪೋಡಿಯಂ ಅನ್ನು ಕೊಡುಗೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಬದುಕಿನಲ್ಲಿ ಸ್ನೇಹ ಮುಖ್ಯ. ಹಳೆಯ ವಿದ್ಯಾರ್ಥಿಗಳೆಲ್ಲ ಒಟ್ಟುಗೂಡಿ ತಾವು ಕಲಿತ ಶಾಲೆಯಲ್ಲಿ ಮತ್ತೆ ಒಟ್ಟಾಗಿ ಕೂಡಿರುವುದು ಖುಷಿ ತಂದಿದೆ. ವಿದ್ಯೆ ಜೀವನದಲ್ಲಿ ಪರಿವರ್ತನೆ ತರುವ ಮಾರ್ಗವಾಗಿದೆ ಎಂದರು.

    ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್, ಹಿರಿಯ ವಿದ್ಯಾರ್ಥಿಗಳಾದ ಮಲ್ಲೇಶ್, ಬೀರೇಶ್, ರಕ್ಷಿತ್, ಪ್ರಕಾಶ್, ಉಮೇಶ್, ಮಂಜು, ರವಿಕುಮಾರ್, ಪ್ರಮೋದ್, ಸುಸಾನ್, ಆಶಾ, ಗಣೇಶ, ಕಿರಣ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts