More

    ಋತುಮಾನಕ್ಕೆ ತಕ್ಕಂತೆ ಹಿತಮಿತ ಆಹಾರ ಸೇವಿಸಿ


    ಕಿಕ್ಕೇರಿ: ಹಸಿವಿಲ್ಲದಿದ್ದರೂ ಆಹಾರ ಸೇವಿಸುವ ಪದ್ಧತಿ ಬಿಡಿ. ಆಹಾರವನ್ನೇ ಔಷಧವಾಗಿ ಸ್ವೀಕರಿಸಿ ಆರೋಗ್ಯವಂತರಾಗಿ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ತಿಳಿಸಿದರು.

    ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಕಿಕ್ಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಮನೆಯ ಸುತ್ತಮುತ್ತ ಸಾಕಷ್ಟು ಸಂಜೀವಿನಿಯಂತಹ ಗಿಡಮೂಲಿಕೆಗಳಿವೆ. ಅರಿವಿನ ಕೊರತೆಯಿಂದ ಎಲ್ಲವೂ ನಾಶವಾಗುತ್ತಿದೆ. ರೋಗ ಬರುವ ಮುನ್ನ ಜಾಗೃತರಾಗಿ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಹಿತವಾದ ಆಹಾರವನ್ನು ಋತುಮಾನಕ್ಕೆ ತಕ್ಕಂತೆ ಅಗತ್ಯವಿದಷ್ಟು ಸೇವಿಸಿದರೆ ರೋಗ ದೂರವಾಗಲಿವೆ. ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಬದುಕಿನ ಅಂಗವಾಗಿ ಸ್ವೀಕರಿಸಿ ಪಾಲಿಸಿದರೆ ರೋಗವನ್ನು ದೂಡಬಹುದು ಎಂದರು.

    ಐಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಪ್ರಾಂಶುಪಾಲ ದೊರೆಸ್ವಾಮಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್. ಧರ್ಮಪ್ಪ, ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಪ್ರಾಥಮಿಕ ಶಾಲಾ ಶಿಕ್ಷಕ ತಾಲೂಕು ಅಧ್ಯಕ್ಷ ಪದ್ಮೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts